- Advertisement -
![]()
- Advertisement -
ತುಮಕೂರು: ಇಲ್ಲಿನ ಕೊರಟಗೆರೆಯ ಮಿನಿ ವಿಧಾನಸೌಧದ ಕಟ್ಟಡದಲ್ಲಿದ್ದ ಹೆಜ್ಜೇನು ಕಂದಾಯ ಇಲಾಖೆ ಸಿಬ್ಬಂದಿ ಸೇರಿದಂತೆ ಮೂವರು ಸಾರ್ವಜನಿಕರ ಮೇಲೆ ದಾಳಿ ಮಾಡಿರುವ ಘಟನೆ ನ. 27ರ ಬುಧವಾರದಂದು ನಡೆದಿದೆ.
ಸಿಬ್ಬಂದಿ ಸೇರಿದಂತೆ ಮೂವರು ಸಾರ್ವಜನಿಕರನ್ನು ಕೂಡ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸಾರ್ವಜನಿಕರು ಪಟ್ಟಣದ ಮಿನಿ ವಿಧಾನ ಸೌಧ ಕಚೇರಿಗೆ ತೆರಳುವ ವೇಳೆ ಈ ಘಟನೆ ನಡೆದಿದೆ ಎನ್ನಲಾಗಿದೆ.
ಹೆಜ್ಜೇನು ದಾಳಿಗೊಳಗಾದವರನ್ನು ಗ್ರಾಮ ಸಹಾಯಕ ರಘುನಂದನ್, ತುಮಕೂರಿನ ಅನಂತರಾಜು, ರಮೇಶ್, ಕೊರಟಗೆರೆಯ ಶಿವಣ್ಣಎನ್ನಲಾಗಿದೆ.
- Advertisement -


