Friday, June 5, 2026
Homeಕರಾವಳಿಉಡುಪಿಎದೆನೋವಿನಿಂದ ಬಳಲುತ್ತಿದ್ದ ಅಕೌಂಟೆಂಟ್‌ ಸಾವು

ಎದೆನೋವಿನಿಂದ ಬಳಲುತ್ತಿದ್ದ ಅಕೌಂಟೆಂಟ್‌ ಸಾವು

- Advertisement -
- Advertisement -

ಉಡುಪಿ: ಅಕೌಂಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವ್ಯಕ್ತಿಯೋರ್ವ ಎದೆನೋವಿನಿಂದ ಬಳಲಿ ಸಾವನ್ನಪ್ಪಿದ ಘಟನೆ ಸಂಭವಿಸಿದೆ.

ಮೃತಪಟ್ಟ ವ್ಯಕ್ತಿ ಹಂದಾಡಿ ನಿವಾಸಿ ಪ್ರದೀಪ್‌ ಕುಮಾರ್‌ ಕೆ. (38) ಎಂದು ತಿಳಿದು ಬಂದಿದೆ.

ಉಡುಪಿಯ ಶಿಕ್ಷಣ ಸಂಸ್ಥೆಯಲ್ಲಿ ಅಕೌಂಟೆಂಟ್‌ ಆಗಿ ಕೆಲಸ ಮಾಡಿ ಕೊಂಡಿದ್ದ ಅವರಿಗೆ ಅ.9 ರಂದು ಬೆಳಗ್ಗೆ ತೀವ್ರ ಎದೆ ನೋವು ಕಾಣಿಸಿಕೊಂಡಿತ್ತು. ಕೂಡಲೇ ಮಣಿಪಾಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ವೈದ್ಯರು ಪರೀಕ್ಷಿಸಿ ಅವರು ಸಾವನ್ನಪ್ಪಿರುವುದಾಗಿ ತಿಳಿಸಿದ್ದಾರೆ.

- Advertisement -

Latest News

error: Content is protected !!