ಬೆಳ್ತಂಗಡಿ; ಸಹಾಯ ಮಾಡುವ ನೆಪದಲ್ಲಿ ಅಪರಿಚಿತರು ಎಟಿಎಂ ನಿಂದ ಹಣ ಎಗರಿಸಿದ ಘಟನೆ ಗೇರುಕಟ್ಟೆ ಕೆನರಾ ಬ್ಯಾಂಕಿನ ATM ಕೇಂದ್ರದಲ್ಲಿ ನಡೆದಿದೆ.
ಬೆಳ್ತಂಗಡಿ ತಾಲೂಕು ನ್ಯಾಯತರ್ಪು ಗ್ರಾಮದ ಜಾರಿಗೆಬೈಲು ನಿವಾಸಿ K M ಅಬೂಬಕ್ಕರ್ (71 ವರ್ಷ) ರವರು ದಿನಾಂಕ: 02/10/2024 ರಂದು ಮಧ್ಯಾಹ್ನ 12.00 ಗಂಟೆಗೆ ಗೇರುಕಟ್ಟೆ ಕೆನರಾ ಬ್ಯಾಂಕಿನ ATM ಕೇಂದ್ರದಲ್ಲಿ ಹಣ ಡ್ರಾ ಮಾಡುತ್ತಿದ್ದಾಗ ATM ಕೇಂದ್ರಕ್ಕೆ ಒಳ ಪ್ರವೇಶಿಸಿದ ಅಪರಿಚಿತ ಇಬ್ಬರು ವ್ಯಕ್ತಿಗಳು ಹಿಂದಿಯಲ್ಲಿ ಮಾತನ್ನಾಡಿ ಸಹಾಯಕ್ಕೆ ಬಂದಿದ್ದು, ಅಬೂಬಕ್ಕರ್ ಸಹಾಯದ ಅಗತ್ಯ ಇಲ್ಲವೆಂದು ತಿಳಿಸಿದರೂ, ಅಪರಿಚಿತರು ಒಳಗಡೆಯೇ ನಿಂತಿದ್ದು, Dಬೂಬಕ್ಕರ್ ನಂತರ ಮದ್ಯಾಹ್ನ 12.00 ಗಂಟೆಗೆ ರು ಹಣ ತೆಗೆದು ATM ಕೇಂದ್ರದಿಂದ ATM ಕಾರ್ಡ್ ನೊಂದಿಗೆ ಹೊರಗಡೆ ಹೋಗಿದ್ದು, ನಂತರ ದಿನಾಂಕ: 04/10/2024 ರಂದು ಅಳಿಯ ಹಾಗೂ ಮಗ ಹಾಕಿದ ಹಣವನ್ನು ಡ್ರಾ ಮಾಡು ATM ಕೇಂದ್ರಕ್ಕೆ ಹೋದಾಗ, ಕಾರ್ಡ್ ರೀಡ್ ಆಗಿಲ್ಲ.
ನಂತರ ಅಬೂಬಕ್ಕರ್ ಅವರು ಬ್ಯಾಂಕ್ ಗೆ ಹೋಗಿ ವಿಚಾರಿಸಿದಾಗ ATM ಕಾರ್ಡ್ ಬದಲಾದ ಬಗ್ಗೆ ತಿಳಿಸಿದ್ದು, ಖಾತೆಯಲ್ಲಿನ ಬ್ಯಾಲೆನ್ಸ್ ಚೆಕ್ ಮಾಡಲಾಗಿ ಖಾತೆಯಲ್ಲಿದ್ದ ರೂ. 49,200/- ಹಣವನ್ನು ವಂಚಿಸಿ ತನ್ನ ATM ಕಾರ್ಡ್ ಬಳಸಿ, ಆ ದಿನ ATM ಕೇಂದ್ರದಲ್ಲಿದ್ದ ಅಪರಿಚಿತ ಇಬ್ಬರು ವ್ಯಕ್ತಿಗಳು ಬೇರೆ ಬೇರೆ ATM ಕೇಂದ್ರದಲ್ಲಿ ತೆಗೆದು ಕಳವು ಮಾಡಿದ್ದು, ಈ ಬಗ್ಗೆ ವಂಚಿಸಿ ಕಳವು ಮಾಡಿದ ಅಪರಿಚಿತ ವ್ಯಕ್ತಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಬೆಳ್ತಂಗಡಿ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇನ್ನು ಭಾವಚಿತ್ರದಲ್ಲಿರುವ ಅಪರಿಚಿತ ವ್ಯಕ್ತಿಗಳನ್ನು ಪತ್ತೆ ಮಾಡಲು ಸಹಕರಿಸಿ ಪತ್ತೆಯಾದಲ್ಲಿ ಬೆಳ್ತಂಗಡಿ ಪೊಲೀಸ್ ಠಾಣೆಯನ್ನು ಸಂಪರ್ಕಿಸುವಂತೆ ಈ ಮೂಲಕ ಕೋರಲಾಗಿದೆ. ಸಂಪರ್ಕಿಸಬೇಕಾದ ಸಂಖ್ಯೆ;08256 – 232093