- Advertisement -
![]()
- Advertisement -
ಸುರತ್ಕಲ್: ಇಲ್ಲಿನ ಕೃಷ್ಣಾಪುರ ಕಾಟಿಪಳ್ಳ ಮೂರನೆಯ ಬ್ಲಾಕ್ ಬಳಿಯ ಮಸೀದಿಯೊಂದಕ್ಕೆ ಕಿಡಿಗೇಡಿಗಳು ಕಲ್ಲು ಬಿಸಾಡಿರುವ ಘಟನೆ ರವಿವಾರ(ಸೆ.15) ತಡರಾತ್ರಿ ನಡೆದಿದೆ.
ಬೈಕ್ ನಲ್ಲಿ ಬಂದ ಕಿಡಿಗೇಡಿಗಳ ತಂಡವೊಂದು ಕೃಷ್ಣಾಪುರ ಕಾಟಿಪಳ್ಳ ಮೂರನೆಯ ಬ್ಲಾಕ್ ಬಳಿ ಇರುವ ಮಸೀದಿಗೆ ಕಲ್ಲು ಬಿಸಾಡಿ ಸ್ಥಳದಿಂದ ಪರಾರಿಯಾಗಿರುವುದಾಗಿ ಮಾಹಿತಿ ಲಭಿಸಿದೆ.
ಘಟನಾ ಸ್ಥಳಕ್ಕೆ ಪಣಂಬೂರು ಎಸಿಪಿ ಮನೋಜ್ ಕುಮಾರ್ ಹಾಗೂ ಸುರತ್ಕಲ್ ಠಾಣೆಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕುತ್ತಿದ್ದಾರೆ.
- Advertisement -


