ಪುತ್ತೂರು; ಕರ್ತವ್ಯನಿರತ ಪೊಲೀಸ್ ಸಿಬ್ಬಂದಿಗೆ ಹಲ್ಲೆ ನಡೆಸಿದಾತ ಅರೆಸ್ಟ್ ಆಗಿರುವ ಘಟನೆ ಪುತ್ತೂರಿನ ಬನ್ನೂರಿನಲ್ಲಿ ನಡೆದಿದೆ. ತೇಜಸ್ ಬಂಧಿತ ಆರೋಪಿ.
ಬನ್ನೂರಿನಲ್ಲಿ ತಾಯಿ ಮಗನ ನಡುವೆ ಗಲಾಟೆ ನಡೆದಿತ್ತು. ಈ ವೇಳೆ ವಿಚಾರಣೆಗೆಂದು ಪೊಲೀಸರು ಸ್ಥಳಕ್ಕೆ ತೆರಳಿದ್ದರು. ಈ ವೇಳೆ ಆರೋಪಿಯ ತಾಯಿ ಚಂದ್ರಾವತಿ ಅವರನ್ನು ಮನೆಯಲ್ಲಾದ ಗಲಾಟೆಯ ಬಗ್ಗೆ ಪೊಲೀಸರು ವಿಚಾರಿಸಿದ್ದಾರೆ.ಆಗ ಮನೆಯ ಒಳಗಿನಿಂದ ಬಂದ ಆರೋಪಿ ತೇಜಸ್ ಪೊಲೀಸರು ನಮ್ಮ ಮನೆಗೆ ಯಾಕೆ ಬಂದಿದ್ದಿರಿ ಎಂದು ಅವ್ಯಾಚ್ಯವಾಗಿ ನಿಂದಿಸಿದ್ದಾನೆ. ಅಲ್ಲದೇ ಪೊಲೀಸರ ಕಾರಿಗೆ ಮನೆಯಲ್ಲಿದ್ದ ಒಂದು ಕಾರನ್ನ ಅಡ್ಡವಾಗಿ ಇಟ್ಟು ಪೊಲೀಸರ ಕರ್ತವ್ಯಕ್ಕೆ ಅಡ್ಡಿ ಮಾಡಿ ಕಬ್ಬಿಣದ ರಾಡ್ ನಿಂದ ಹಲ್ಲೆ ಮಾಡಿದ್ದಾನೆ. ಪೊಲೀಸ್ ಸಿಬ್ಬಂದಿ ವಿನಾಯಕ ಅವರ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಸದ್ಯ ಕೆದಂಬಾಡಿ ಗ್ರಾಮದ ಶೀನಪ್ಪ ಗೌಡ ಎಂಬವರ ದೂರಿನಂತೆ ತೇಜಸ್ ನ ವಿರುದ್ಧ ಪುತ್ತೂರು ನಗರ ಠಾಣೆಯಲ್ಲಿ ಮೊಕದ್ದಮೆ ದಾಖಲಾಗಿದೆ. ಆರೋಪಿ ತೇಜಸ್ ನನ್ನ ಬಂಧಿಸಿಲಾಗಿದೆ.