- Advertisement -
- Advertisement -
ಧರ್ಮಸ್ಥಳ: ಅಪ್ರಾಪ್ತ ಬಾಲಕಿಯೊಬ್ಬಳನ್ನು ಮನೆಯಿಂದ ಪುಸಲಾಯಿಸಿ ಕರೆದುಕೊಂಡು ಹೋಗಿ ಬೆಳ್ತಂಗಡಿಯ ನಾಗವರ್ಮ ಮೆಲಂತಬೆಟ್ಟು ದೇವಾಸ್ಥಾನದಲ್ಲಿ ಅನದೀಕೃತವಾಗಿ ವಿವಾಹವಾಗಿರುವ ಘಟನೆ ಧರ್ಮಸ್ಥಳ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಲಾಯಿಲ ಗ್ರಾಮದ ಮುದ್ರಾಜೆ ಪೆಲತ್ತಡಿ ಮನೆಯ ಕಿರಣ್ ಮಲೆಕುಡಿಯ ಅಪಹರಣ ಪ್ರಕರಣದ ಆರೋಪಿ.
ಘಟನೆಯ ವಿವರ:
ಧರ್ಮಸ್ಥಳ ಪರಿಸರದ ಅಪ್ರಾಪ್ತ ವಯಸ್ಸಿನ ಬಾಲಕಿಯೊಬ್ಬಳು ಅಜ್ಜನ ಮನೆಗೆ ಹೋಗುವುದಾಗಿ ಹೇಳಿದ್ದು ಬಳಿಕ ವಿಚಾರ ಮಾಡಿದಾಗ ಅಜ್ಜನ ಮನೆಗೆ ಹೋಗದೆ ಇದ್ದು, ಈಕೆಯನ್ನು ಕಿರಣ್ ಅಪಹರಿಸಿಕೊಂಡು ಹೋಗಿ ಬೆಳ್ತಂಗಡಿಯ ನಾಗವರ್ಮ ಮೆಲಂತಬೆಟ್ಟು ದೇವಾಸ್ಥಾನ ದಲ್ಲಿ ಅನದೀಕೃತವಾಗಿ ವಿವಾಹವಾಗಿದ್ದು ಬೆಳಕಿಗೆ ಬಂದಿದೆ.
ಈ ಕುರಿತು ಬಾಲಕಿಯ ಪೋಷಕರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಕೂಡಲೇ ನಮ್ಮ ಮಗಳನ್ನು ಹುಡುಕಿ ಕೊಡಿ ಎಂದು ದೂರಿನಲ್ಲಿ ತಿಳಿಸಿದ್ದಾರೆ.
- Advertisement -