- Advertisement -
- Advertisement -
ಪುತ್ತೂರು: ಪದ್ಮಶ್ರೀ ಪುರಸ್ಕೃತ ಅಮೈ ಮಹಾಲಿಂಗ ನಾಯ್ಕ ಅವರ ಕುರಿತು ಪುತ್ತೂರಿನ ಲೇಖಕ, ಅಂಕಣಕಾರ ಹಾಗೂ ಉಪನ್ಯಾಸಕ ಡಾ.ನರೇಂದ್ರ ರೈ ದೇರ್ಲ ಅವರು ಬರೆದ ಲೇಖನವು ತುಮಕೂರು ವಿಶ್ವ ವಿದ್ಯಾನಿಲಯದ ಪದವಿ ತರಗತಿಗಳಿಗೆ ಕನ್ನಡ ಪಠ್ಯಕ್ಕೆ ಸೇರ್ಪಡೆಗೊಂಡಿದೆ. ಈ ವಿಶ್ವ ವಿದ್ಯಾನಿಲಯದ ಪದವಿ ಪಠ್ಯದ ಆಯ್ಕೆ ಸಮಿತಿಯು ಬಿಎ, ಬಿಕಾಂ, ಬಿಎಸ್ಸಿ ಮತ್ತು ಬಿಬಿಎ ಪದವಿಯ ಎಲ್ಲಾ ವಿದ್ಯಾರ್ಥಿಗಳು ಓದುವ ಸ್ಪೂರ್ತಿಯ ಕಥನ ಮಾಲಿಕೆಯಲ್ಲಿ ಈ ಲೇಖನವನ್ನು ಸೇರಿಸಿ ಕಲಿಕೆಗೆ ಒದಗಿಸಿದೆ.
ಡಾ. ನರೇಂದ್ರ ರೈ ದೇರ್ಲ ಅವರು ಒಂದು ವರ್ಷಗಳ ಹಿಂದೆ ‘ಸುರಂಗದ ನೀರಿನಲ್ಲಿ ತೇಲಿ ಬಂತು ಪದ್ಮಶ್ರೀ’ ಎಂಬ ಲೇಖನವನ್ನು ಬರೆದಿದ್ದರು. ಈ ಲೇಖನ ತರಂಗ ವಾರಪತ್ರಿಕೆಯಲ್ಲಿ ವಿಶೇಷ ಲೇಖನವಾಗಿ ಪ್ರಕಟಗೊಂಡಿತ್ತು. ಇದೀಗ ತುಮಕೂರು ವಿಶ್ವವಿದ್ಯಾನಿಲಯವು ಈ ಲೇಖನವನ್ನು ಪದವಿ ಪಠ್ಯಕ್ಕೆ ಆಯ್ಕೆ ಮಾಡಿಕೊಂಡಿದೆ.
- Advertisement -