- Advertisement -
- Advertisement -
ಸುಳ್ಯ: ದಕ್ಷಿಣಕನ್ನಡ – ಕೊಡಗು ಗಡಿ ಭಾಗದಲ್ಲಿ ಮತ್ತೆ ಭೂಮಿ ಕಂಪಿಸಿದೆ.ಭಾರೀ ಶಬ್ದಕ್ಕೆ ಜನ ಬೆಚ್ಚಿ ಬಿದ್ದಿದ್ದಾರೆ.
ಇಂದು ಬೆಳಿಗ್ಗೆ 6.23ರ ಸುಮಾರಿಗೆ ಭೂಮಿ ಕಂಪಿಸಿದೆ. ಹಲವೆಡೆ ಹಲವು ರೀತಿಯಲ್ಲಿ ಇದರ ಪ್ರತಿಫಲನ ವ್ಯಕ್ತವಾಗಿದೆ.
ಭೂಮಿಯೊಳಗಿನಿಂದ ಗುಡುಗಿನ ಶಬ್ದದಂತೆ ಕೇಳಿ ಬಂದು ಬಳಿಕ ಭೂಮಿ ಅಲುಗಾಡಿದ ಅನುಭವವಾಗಿದೆ ಎನ್ನುತ್ತಿದ್ದಾರೆ ಜನ.
ಸುಳ್ಯ, ಅರಂತೋಡು, ಸಂಪಾಜೆ, ಪೆರಾಜೆ, ಎಲಿಮಲೆ, ಮರ್ಕಂಜ, ಕೊಡಗು ಸಂಪಾಜೆ ಸೇರಿದಂತೆ ಹಲವು ಭಾಗಗಳಲ್ಲಿ ಈ ಅನುಭವ ಉಂಟಾಗಿದ್ದು ಎಂಟನೇ ಬಾರಿ ಭೂ ಕಂಪನ ದಾಖಲಾಗುತ್ತಿದೆ.
- Advertisement -