- Advertisement -
- Advertisement -
ಕಾಸರಗೋಡು: ನದಿಗಿಳಿದು ಸ್ನಾನ ಮಾಡುತ್ತಿದ್ದಾಗ ನೀರಿನಲ್ಲಿ ಮುಳುಗಿ ಮೇಲೆ ಬರಲು ಸಾಧ್ಯವಾಗದೇ ಅಪಾಯದಂಚಿನಲ್ಲಿದ್ದ 11 ವರ್ಷದ ಬಾಲಕನನ್ನು 8 ವರ್ಷದ ಬಾಲಕನೊಬ್ಬ ಧೈರ್ಯದಿಂದ ರಕ್ಷಣೆ ಮಾಡಿದ ಘಟನೆ ಕಾಸರಗೋಡಿನ
ಪಳ್ಳಂಗೋಡು ಸಮೀಪದ ಪಯಸ್ವಿನಿ ನದಿಯಲ್ಲಿ ನಡೆದಿದೆ. ಪಳ್ಳಂಗೋಡಿನ ಇಬ್ರಾಹಿಂ ನಈಮಿ-ಬುಶ್ರಾ ದಂಪತಿಯ ಪುತ್ರ ಮುಹಮ್ಮದ್ ಹಿಬಾತುಲ್ಲ (8) ಬಾಲಕನನ್ನು ರಕ್ಷಿಸಿದ ಪುಟಾಣಿ.
ಇನ್ನು ಬಾಲಕನ ಸಾಹಸ ಮತ್ತು ಸಮಯಪ್ರಜ್ಞೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅನೇಕ ಸಂಘ ಸಂಸ್ಥೆಗಳು ಬಾಲಕನನ್ನು ಸನ್ಮಾನಿಸಲು ಮುಂದಾಗಿವೆ.
- Advertisement -