Thursday, June 4, 2026
Homeಕರಾವಳಿಮಂಗಳೂರುಪುತ್ತೂರು; 7ನೇ ತರಗತಿ ವಿದ್ಯಾರ್ಥಿ ಅನಾರೋಗ್ಯದಿಂದ ನಿಧನ

ಪುತ್ತೂರು; 7ನೇ ತರಗತಿ ವಿದ್ಯಾರ್ಥಿ ಅನಾರೋಗ್ಯದಿಂದ ನಿಧನ

- Advertisement -
- Advertisement -

ಪುತ್ತೂರು; 7ನೇ ತರಗತಿ ವಿದ್ಯಾರ್ಥಿ ಅನಾರೋಗ್ಯದಿಂದ ನಿಧನವಾಗಿರುವ ಘಟನೆ ಪುತ್ತೂರಿನ ಬಟ್ರುಪಾಡಿಯಲ್ಲಿ ನಡೆದಿದೆ.ಕೊಡಿಪ್ಪಾಡಿ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಆಕಾಶ್ ಮೃತ ಬಾಲಕ.

 ರಿಕ್ಷಾ ಚಾಲಕರಾಗಿದ್ದ ಆಕಾಶ್ ತಂದೆ ಸ್ವಲ್ಪ ಸಮಯದ ಹಿಂದೆ ಸಾವನ್ನಪ್ಪಿದ್ದರು.ಇದೀಗ ಅನಾರೋಗ್ಯದಿಂದ ಬಳಲುತ್ತಿದ್ದ ಆಕಾಶ್ ಕೂಡ ಸಾವನ್ನಪ್ಪಿದ್ದು ಅವರ ಕುಟುಂಬ ದುಃಖದ ಕಡಲಲ್ಲಿ ಮುಳುಗುವಂತೆ ಮಾಡಿದೆ.

ಅನಾರೋಗ್ಯದ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆಕಾಶ್ ಚಿಕಿತ್ಸೆ ಫಲಿಸದೇ ಅಲ್ಲಿ ಸಾವನ್ನಪ್ಪಿದ್ದಾನೆ. ಆಕಾಶ್ ತಾಯಿ, ಸಹೋದರ ಹಾಗೂ ಸಹೋದರಿಯನ್ನು ಅಗಲಿದ್ದಾನೆ.

- Advertisement -

Latest News

error: Content is protected !!