Wednesday, September 27, 2023
Homeತಾಜಾ ಸುದ್ದಿಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ನಾಲ್ವರು ಕೊರೊನಾ ಶಂಕಿತರು

ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಿ ಪರಾರಿಯಾದ ನಾಲ್ವರು ಕೊರೊನಾ ಶಂಕಿತರು

- Advertisement -
- Advertisement -

ಕೊರೊನಾ ಸೋಂಕು ತಗುಲಿರುವ ಬಗ್ಗೆ ಕೈಗೆ ಸೀಲ್ ತೋರಿಸಿ ನಮ್ಮನ್ನು ಮುಟ್ಟಬೇಡಿ ಎಂದು ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆ ತಾಲ್ಲೂಕಿನ ಹಾದನೂರು ಚೆಕ್‌ಪೋಸ್ಟ್‌ನಲ್ಲಿದ್ದ ಪೊಲೀಸರಿಗೆ ಬೆದರಿಸಿ ನಾಲ್ವರು ಯುವಕರು ಪರಾರಿಯಾಗಿರುವ ಘಟನೆ ನಡೆದಿದೆ.
ಮೈಸೂರು ಕಡೆಯಿಂದ ಕೆ.ಆರ್.ಪೇಟೆ ಕಡೆಗೆ ಆಟೋದಲ್ಲಿ ಬಂದಿದ್ದ ನಾಲ್ವರನ್ನು ಚೆಕ್‌ಪೋಸ್ಟ್‌ನಲ್ಲಿ ಪೊಲೀಸ್ ಸಿಬ್ಬಂದಿ ತಡೆದಾಗ, ಹತ್ತಿರ ಬಂದರೆ ಮುಟ್ಟಿ, ರೋಗ ಹರಡುವುದಾಗಿ ಬೆದರಿಕೆ ಹಾಕಿದರು.ಬ್ಯಾರಿಕೇಡ್‌ಗಳನ್ನು ತಾವೇ ಪಕ್ಕಕ್ಕೆ ಸರಿಸಿ ಮುಂದಕ್ಕೆ ತೆರಳಿದರು. ಪೊಲೀಸರು ಆಟೊವನ್ನು ಹಿಂಬಾಲಿಸಿದರಾದರೂ, ಕತ್ತಲಲ್ಲಿ ರಾಜ್ಯ ಹೆದ್ದಾರಿ ಬಿಟ್ಟು ಹಳ್ಳಿ ರಸ್ತೆಯಲ್ಲಿ ತೆರಳಿದ ಕಾರಣ ಆಟೊ ಪತ್ತೆಯಾಗಿಲ್ಲ.

ಸ್ಥಳಕ್ಕೆ ಬಂದ ಕೆ.ಆರ್.ಪೇಟೆ ತಹಶೀಲ್ದಾರ್ ಎಂ.ಶಿವಮೂರ್ತಿ, ಪಟ್ಟಣ ಠಾಣೆ ಸಬ್ ಇನ್‌ಸ್ಪೆಕ್ಟರ್ ಬ್ಯಾಟರಾಯಗೌಡ ಚೆಕ್‌ಪೋಸ್ಟ್ ಸಿಬ್ಬಂದಿಯಿಂದ ಮಾಹಿತಿ ಪಡೆದರು.
ತಾಲ್ಲೂಕಿನ ಗಡಿಯಲ್ಲಿ ಸ್ಥಾಪಿಸಲಾಗಿರುವ ಚೆಕ್‌ಪೋಸ್ಟ್ ಬಿಗಿಗೊಳಿಸಲಾಗಿದ್ದು ತಾಲ್ಲೂಕು ಪ್ರವೇಶ ಮಾಡಿರುವ ಅಪರಿಚಿತ ಯುವಕರನ್ನು ಪತ್ತೆ ಮಾಡಲಾಗುವುದು ಎಂದು ತಹಶೀಲ್ದಾರ್ ತಿಳಿಸಿದ್ದಾರೆ.

- Advertisement -
spot_img

Latest News

error: Content is protected !!