Saturday, May 4, 2024
Homeಕರಾವಳಿಕಾರ್ಯನಿರ್ವಾಹಣಾಧಿಕಾರಿ ಕಛೇರಿ ಮುಂದೆ ಧರಣಿ ಕೂತ 27 ಮಂದಿ; ಜಿಲ್ಲಾಧಿಕಾರಿ ಸೂಚಿಸಿದರೂ ಮರುನೇಮಕಗೊಳ್ಳದ ಕೆಲಸಗಾರರು

ಕಾರ್ಯನಿರ್ವಾಹಣಾಧಿಕಾರಿ ಕಛೇರಿ ಮುಂದೆ ಧರಣಿ ಕೂತ 27 ಮಂದಿ; ಜಿಲ್ಲಾಧಿಕಾರಿ ಸೂಚಿಸಿದರೂ ಮರುನೇಮಕಗೊಳ್ಳದ ಕೆಲಸಗಾರರು

spot_img
- Advertisement -
- Advertisement -

ಸುಬ್ರಹ್ಮಣ್ಯ:  ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಕಳೆದ 3 ತಿಂಗಳ ಹಿಂದೆ ಕೆಲಸ ಕಳೆದುಕೊಂಡ 27 ಜನ ಪಂಚಪರ್ವದ ಕೆಲಸದವರು ಜೂ.11 ರಂದು ಕಾರ್ಯನಿರ್ವಹಣಾಧಿಕಾರಿ ಕಚೇರಿಯಲ್ಲಿ ಧರಣಿ ಆರಂಭಿಸಿದ್ದಾರೆ.

ಕಾರ್ಯನಿರ್ವಾಹಣಾಧಿಕಾರಿಯು ಪಂಚಪರ್ವದ 27 ಜನ ಕೆಲಸಗಾರರನ್ನು ಮೂರು ತಿಂಗಳ ಹಿಂದೆ ಕೆಲಸದಿಂದ ಬಿಡುಗಡೆಗೊಳಿಸಿದ್ದರು. ಈ ಕುರಿತು ಆಡಳಿತ ಮಂಡಳಿ ಮತ್ತೆ ಕೆಲಸಗಾರರನ್ನು ತೆಗೆದುಕೊಳ್ಳಬೇಕೆಂಬ ನಿರ್ಣಯವನ್ನು ತೆಗೆದುಕೊಂಡಿದ್ದು, ಇದರನ್ವಯ ಜಿಲ್ಲಾಧಿಕಾರಿಗಳಿಗೆ ಪತ್ರವು ಬರೆಯಲಾಗಿತ್ತು.

ಆದರೆ ಇತ್ತೀಚೆಗೆ ಸುಬ್ರಹ್ಮಣ್ಯಕ್ಕೆ ಆಗಮಿಸಿದ್ದ ಜಿಲ್ಲಾಧಿಕಾರಿಯವರು ತಮ್ಮ ಮಾಸ್ಟರ್ ಪ್ಲಾನ್ ಸಭೆಯಲ್ಲಿ ಪಂಚಪರ್ವದ ಕೆಲಸದವರನ್ನು ಮತ್ತೆ ತೆಗೆದುಕೊಳ್ಳುವಂತೆ ಸೂಚನೆ ನೀಡಿದ್ದರು ಎನ್ನಲಾಗಿದೆ. ಈ ಕುರಿತು ಎರಡು ವಾರ ಕಳೆದರೂ ಯಾವುದೇ ಬೆಳವಣಿಗೆಗಳು ಆಗದಿರುವುದರಿಂದ ಪಂಚಪರ್ವದ ಕೆಲಸದವರು ಬೆಳಗ್ಗಿನಿಂದ ಕಾರ್ಯ ನಿರ್ವಹಣಾಧಿಕಾರಿ ಕಚೇರಿ ಮುಂದೆ ಧರಣಿ ಆರಂಭಿಸಿದ್ದಾರೆ.

- Advertisement -
spot_img

Latest News

error: Content is protected !!