Friday, June 27, 2025
Homeತಾಜಾ ಸುದ್ದಿಕುವೈತ್ ನಲ್ಲಿ ಭಾರೀ ಅಗ್ನಿ ದುರಂತ; ಕೇರಳ ಮೂಲದ 11 ಮಂದಿ ಸಾವು

ಕುವೈತ್ ನಲ್ಲಿ ಭಾರೀ ಅಗ್ನಿ ದುರಂತ; ಕೇರಳ ಮೂಲದ 11 ಮಂದಿ ಸಾವು

spot_img
- Advertisement -
- Advertisement -

ಕುವೈತ್ ನಲ್ಲಿ ನಿನ್ನೆ ಸಂಭವಿಸಿದ ಭಾರೀ ಅಗ್ನಿ ದುರಂತದಲ್ಲಿ ಕೇರಳ ಮೂಲದ 11 ಮಂದಿ ಸಾವನ್ನಪ್ಪಿದ್ದಾರೆ ಅನ್ನೋ ಶಾಕಿಂಗ್ ಸುದ್ದಿ ಹೊರ ಬಿದ್ದಿದೆ.

ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅವರು ಕುವೈತ್ ಗೆ ತೆರಳಿದ್ದು  ಬೆಂಕಿಯಲ್ಲಿ ಗಾಯಗೊಂಡವರ ಚಿಕಿತ್ಸೆಗೆ ನೀಡಲು ಹಾಗೂ ಮತ್ತು ಶವಗಳನ್ನು ದೇಶಕ್ಕೆ ತರಲು ಸಹಾಯ ಮಾಡುತ್ತಿದ್ದಾರೆ ಎನ್ನಲಾಗಿದೆ.

ಅಗ್ನಿ ದುರಂತದಲ್ಲಿ ಮೃತಪಟ್ಟ ರಾಜ್ಯದ ಕಾರ್ಮಿಕರ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರವನ್ನು ಕೇರಳ ಸರ್ಕಾರ ಘೋಷಿಸಿದೆ.ಅಹ್ಮದಿ ಗವರ್ನರೇಟ್ನ ಮಂಗಾಫ್ನಲ್ಲಿ 195 ವಲಸೆ ಕಾರ್ಮಿಕರನ್ನು ಹೊಂದಿರುವ ಏಳು ಅಂತಸ್ತಿನ ಕಟ್ಟಡದ ಅಡುಗೆಮನೆಯಲ್ಲಿ ಬುಧವಾರ ಬೆಂಕಿ ಕಾಣಿಸಿಕೊಂಡಿದೆ. ಮುಂಜಾನೆ 4 ಗಂಟೆಯ ನಂತರ ಕಟ್ಟಡದ 196 ನಿವಾಸಿಗಳಲ್ಲಿ ಹೆಚ್ಚಿನವರು ನಿದ್ರೆಯಲ್ಲಿದ್ದಾಗ ಬೆಂಕಿ ಹರಡಲು ಪ್ರಾರಂಭಿಸಿದೆ. ಪರಿಣಾಮ ಅನಾಹುತದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದೇ ಹಲವರು ಉಸಿರು ಚೆಲ್ಲಿದ್ದಾರೆ.

- Advertisement -
spot_img

Latest News

error: Content is protected !!