ಚಿಕ್ಕಮಗಳೂರು; ಟ್ರಕ್ಕಿಂಗ್ ಹೊರಟು 10 ಮೆಡಿಕಲ್ ಕಾಲೇಜು ವಿದ್ಯಾರ್ಥಿಗಳು ದಾರಿ ತಪ್ಪಿದ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಲ್ಲಾಳರಾಯನದುರ್ಗಾದಲ್ಲಿ ನಡೆದಿದೆ.
ಚಿತ್ರದುರ್ಗದಿಂದ ಬಸವೇಶ್ವರ ಮೆಡಿಕಲ್ ಕಾಲೇಜಿನ 5 ಹುಡುಗರು, 5 ಹುಡುಗಿಯರು ಜೂ.9 ರಂದು ಬೆಳಗ್ಗೆ ಟ್ರಕ್ಕಿಂಗ್ ಹೊರಟಿದ್ರು. ಬಲ್ಲಾಳರಾಯನ ದುರ್ಗಾ ಕಡೆಯಿಂದ ಟಿಕೆಟ್ ಬುಕ್ ಮಾಡಿ, ಬಂಡಾಜೆ ಭಾಗದಿಂದ ಟ್ರಕ್ಕಿಂಗ್ ಆರಂಭಿಸಿದ್ದರು.ಆದರೆ ಹಾಗೆ ಹೋದ 10 ವಿದ್ಯಾರ್ಥಿಗಳು ಬಲ್ಲಾಳರಾಯನ ದುರ್ಗಾ ಕಾಡಲ್ಲಿ ದಾರಿ ತಪ್ಪಿದ್ದಾರೆ. ಇನ್ನು ದಾರಿ ತಿಳಿಯದೆ ಕಾಡಲ್ಲಿ ವಿದ್ಯಾರ್ಥಿಗಳು ಅತಂತ್ರವಾಗಿ ನಿತ್ರಾಣಗೊಂಡಿದ್ರು.ನಿತ್ರಾಣಗೊಂಡ ಬಗ್ಗೆ ವಿದ್ಯಾರ್ಥಿಗಳ ತಂಡ ಟಿಟಿ ಚಾಲಕನಿಗೆ ಮಾಹಿತಿ ನೀಡಿತ್ತು. ಅದರಂತೆ ದಾರಿ ತಪ್ಪಿದ ವಿದ್ಯಾರ್ಥಿಗಳನ್ನು ಹುಡುಕಲು ಹೋದ ಟಿಟಿ ಚಾಲಕ ಕೂಡ ನಾಪತ್ತೆಯಾಗಿದ್ದರು. ಬಳಿಕ ಪೊಲೀಸರು-ಸ್ಥಳಿಯರು-ಅರಣ್ಯ ಇಲಾಖೆ ಸಿಬ್ಬಂದಿ ಜೂ.9 ರಂದು ಮಧ್ಯರಾತ್ರಿ 2 ಗಂಟೆಗೆ 11 ಮಂದಿಯನ್ನು ಹುಡುಕಿ ಪತ್ತೆ ಹಚ್ಚಿದ್ದಾರೆ

ಬಾಳೂರು ಠಾಣಾಧಿಕಾರಿ ದಿಲೀಪ್ ಕುಮಾರ್ ಹಾಗೂ ಪೊಲೀಸರ ಜೊತೆ ಸ್ನೇಕ್ ಆರೀಫ್, ಮಧ್ಯರಾತ್ರಿ 2 ಗಂಟೆವರೆಗೂ ಶೋಧ ನಡೆಸಿ 11 ಮಂದಿಯನ್ನು ಸುರಕ್ಷತಿವಾಗಿ ತಂದು ವಾಪಸ್ ಕಳುಹಿಸಿದ್ದಾರೆ. ಪೊಲೀಸರು ಹಾಗೂ ಸ್ಥಳೀಯರಿಗೆ ವಿದ್ಯಾರ್ಥಿಗಳು ಅಭಿನಂದನೆ ಸಲ್ಲಿಸಿದ್ದಾರೆ.