Thursday, April 18, 2024
Homeಆರಾಧನಾನಾಗ ದೋಷ ಪರಿಹರಿಸುವ ಸುಬ್ರಹ್ಮಣ್ಯ

ನಾಗ ದೋಷ ಪರಿಹರಿಸುವ ಸುಬ್ರಹ್ಮಣ್ಯ

spot_img
- Advertisement -
- Advertisement -

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ ಸುಪ್ರಸಿದ್ಧ ದೇವಾಲಯ ಕುಕ್ಕೆ ಸುಬ್ರಹ್ಮಣ್ಯ. ಊರಿನ ಮಧ್ಯದಲ್ಲಿರುವ ಈ ದೇಗುಲ ನದಿ-ಕಾಡು-ಪರ್ವತಗಳಿಂದ ಆವೃತವಾಗಿದೆ. ಪ್ರಕೃತಿಯ ಅಪ್ರತಿಮ ಸೌಂದರ್ಯಕ್ಕೆ ಇದು ಕನ್ನಡಿ ಹಿಡಿದಂತಿದೆ. ಶ್ರೀ ಸುಬ್ರಹ್ಮಣ್ಯ ಇಲ್ಲಿನ ಪ್ರಧಾನ ದೇವರು.

ಕುಕ್ಕೆ ಸುಬ್ರಹ್ಮಣ್ಯ ನಾಗಗಳ ವಾಸ ಸ್ಥಾನದ ಸ್ಥಳ. ಇಲ್ಲಿ ಸುಬ್ರಹ್ಮಣ್ಯನಿಗೆ ಸಲ್ಲಿಸಿದ ಪೂಜೆಯು ಸರ್ಪರಾಜನಾದ ವಾಸುಕಿಗೆ ಸಲ್ಲುತ್ತದೆಂಬ ನಂಬಿಕೆಯಿದೆ. ಹಾಗಾಗಿ ಈ ಸ್ಥಳವು ಎಲ್ಲಾ ತರಹದ ನಾಗದೋಷಗಳ ಪರಿಹಾರ ಸ್ಥಳವೆಂದು ನಂಬಲಾಗಿದೆ.

ದೇಶದ ಮೂಲೆ ಮೂಲೆಗಳಿಂದ ಸರ್ಪಸಂಸ್ಕಾರ, ನಾಗಪ್ರತಿಷ್ಠೆ, ಆಶ್ಲೇಷ ಬಲಿ ಹಾಗೂ ಇತರ ಪೂಜಾ ದಿಗಳನ್ನು ಸಲ್ಲಿಸಲು ಭಕ್ತಾದಿಗಳು ಬರುತ್ತಾರೆ.

ಮಂಗಳೂರಿನಿಂದ ಇಲ್ಲಿಗೆ ೧೦೦ ಕಿ.ಮೀ.ದೂರವಿದ್ದು ಸಾಕಷ್ಟು ಬಸ್ ಸೌಲಭ್ಯವಿದೆ.

- Advertisement -
spot_img

Latest News

error: Content is protected !!