Sunday, June 29, 2025
Homeಕರಾವಳಿಧರ್ಮಸ್ಥಳದಲ್ಲಿ ದಿನೇಶ್ ಕೊಲೆ ಪ್ರಕರಣ: ಮೃತ ದಿನೇಶ್ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರ

ಧರ್ಮಸ್ಥಳದಲ್ಲಿ ದಿನೇಶ್ ಕೊಲೆ ಪ್ರಕರಣ: ಮೃತ ದಿನೇಶ್ ಕುಟುಂಬಕ್ಕೆ ಜಿಲ್ಲಾಡಳಿತದಿಂದ ಪರಿಹಾರ

spot_img
- Advertisement -
- Advertisement -

ಬೆಳ್ತಂಗಡಿ: ಧರ್ಮಸ್ಥಳದಲ್ಲಿ ಕೊಲೆಯಾದ ದಿನೇಶ್ ಕುಟುಂಬಕ್ಕೆ ದ.ಕ ಜಿಲ್ಲಾಡಳಿತ ಪರಿಹಾರ ಬಿಡುಗಡೆ ಮಾಡಿದೆ.

ಮೃತ ದಿನೇಶ್ ಅವರ ಪತ್ನಿ ಕವಿತಾ ದಿನೇಶ್ ಅವರ ಕೆನರಾ ಬ್ಯಾಂಕ್ ಖಾತೆಗೆ ಜಿಲ್ಲಾಧಿಕಾರಿ ಹಾಗೂ ಸಮಾಜ ಕಲ್ಯಾಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರ ಜಂಟಿ ಖಾತೆಯಿಂದ 4,12,500 ರೂಪಾಯಿಗಳನ್ನು ಜಮೆ ಮಾಡಲಾಗಿದೆ.

ಕಳೆದ ಫೆಬ್ರವರಿ 23 ರಂದು ಕ್ಷುಲ್ಲಕ ಕಾರಣಕ್ಕಾಗಿ ಭಜರಂಗದಳದ ಕಾರ್ಯಕರ್ತ, ಬಿಜೆಪಿ ಮುಖಂಡ ಕೃಷ್ಣ ಧರ್ಮಸ್ಥಳ ಎಂಬಾತ ದಿನೇಶ್ ಅವರಿಗೆ ಸಾರ್ವಜನಿಕವಾಗಿ ಥಳಿಸಿ , ಗಂಭೀರ ಗಾಯಗೊಳಿಸಿದ್ದ. ಬಳಿಕ ಮಂಗಳೂರಿನ ಜಿಲ್ಲಾ ವೆನ್ಲಾಕ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ದಿನೇಶ್ ಫೆಬ್ರವರಿ 25 ರಂದು ಮೃತಪಟ್ಟಿದ್ದರು. ಇದೀಗ 11 ದಿನಗಳ ಬಳಿಕ ಜಿಲ್ಲಾಡಳಿತ ಪರಿಹಾರ ಧನವನ್ನು ಸಂತ್ರಸ್ತ ಕುಟುಂಬಕ್ಕೆ ಬಿಡುಗಡೆ ಮಾಡಿದೆ.

- Advertisement -
spot_img

Latest News

error: Content is protected !!