- Advertisement -
![]()
- Advertisement -
ಉಡುಪಿ; ಬೈಕ್ ಮೇಲೆ ವಿದ್ಯುತ್ ತಂತಿ ಬಿದ್ದು ಯುವ ಯಕ್ಷಗಾನ ಕಲಾವಿದ ಸಾವನ್ನಪ್ಪಿರುವ ಘಟನೆ ಕೊಪ್ಪ ಸಮೀಪ ನಡೆದಿದೆ. ರಂಜಿತ ಬನ್ನಾಡಿ ಮೃತ ಕಲಾವಿದ.
ರಂಜಿತ್ , ಸೂರಾಲು ಮೇಳದ ಯಕ್ಷಗಾನ ಮಳೆಯಿಂದ ರದ್ದಾದ ಕಾರಣ ಸ್ತ್ರೀವೇಷಧಾರಿ ವಿನೋದ್ ರಾಜ್ ಅವರೊಂದಿಗೆ ವಾಪಸ್ಸಾಗುವಾಗ ಆಗುಂಬೆ ಸಮೀಪ ವಿದ್ಯುತ್ ಕಂಬ ತಂತಿ ಮೈ ಮೇಲೆ ಬಿದ್ದಿದೆ. ಇದರ ಪರಿಣಾಮ ದ್ವಿಚಕ್ರದಲ್ಲಿದ್ದ ರಂಜಿತ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಹಿಂಬದಿ ಸವಾರ ಸ್ತ್ರೀವೇಷಧಾರಿ ವಿನೋದ್ ರಾಜ್ ಅದೃಷ್ಟವಷಾತ್ ಪಾರಾಗಿದ್ದಾರೆ. ಕೂಡಲೇ ಸ್ಥಳಿಯರ ಸಹಕಾರದಿಂದ ಆಂಬ್ಯುಲೆನ್ಸ್ ಮೂಲಕ ಮಣಿಪಾಲ ಕೆ.ಎಂ.ಸಿ ಕರೆ ತರುತ್ತಿರುವಾಗಲೇ ರಂಜಿತ್ ಬನ್ನಾಡಿ ಸಾವನ್ನಪ್ಪಿದ್ದಾರೆ.
- Advertisement -


