Sunday, June 7, 2026
Homeಕರಾವಳಿಸುಳ್ಯ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನಿಧನ

ಸುಳ್ಯ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ನಿಧನ

- Advertisement -
- Advertisement -

ಸುಳ್ಯ ತಾಲೂಕು ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಯುವಕ ಸಾವನ್ನಪ್ಪಿದ ಘಟನೆ ನಡೆದಿದೆ.  ಸರ್ವೆ ಇಲಾಖೆಯ ಉದ್ಯೋಗಿ ಆಲೆಟ್ಟಿ ಗ್ರಾಮದ ಕೆಳಗಿನ ಆಲೆಟ್ಟಿ ದಿ.ನಾರಾಯಣ ಮಣಿಯಾಣಿಯವರ ಪುತ್ರ ಅಶೋಕ್ ಆಲೆಟ್ಟಿ(35 ವರ್ಷ) ಮೃತ ದುರ್ದೈವಿ. ಅಶೋಕ್ ಅನಾರೋಗ್ಯದಿಂದ ನಿಧನರಾಗಿದ್ದಾರೆ ಎನ್ನಲಾಗಿದೆ.   

ಕೆಲದಿನದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅಶೋಕ್ ಸುಳ್ಯದ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಇಂದು ಚಿಕಿತ್ಸೆಗೆ ಸ್ಪಂದಿಸದೇನಿಧನರಾಗಿದ್ದಾರೆ.ಅಶೋಕ ಆಲೆಟ್ಟಿಯವರು ಆಲೆಟ್ಟಿ ಸದಾಶಿವ ಭಜನಾ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರು,ಆಲೆಟ್ಟಿ ಯುವಕ ಮಂಡಲದ ಸಕ್ರಿಯ ಸದಸ್ಯರಾಗಿದ್ದರು. ಮೃತರು ಶಿವಪ್ರಸಾದ್‌ ಮಣಿಯಾಣಿ ಆಲೆಟ್ಟಿ, ಸಹೋದರಿಯರನ್ನು ಹಾಗೂ ಅಪಾರ ಬಂಧು ಮಿತ್ರರನ್ನು ಅಗಲಿದ್ದಾರೆ.

- Advertisement -

Latest News

error: Content is protected !!