Saturday, April 20, 2024
Homeತಾಜಾ ಸುದ್ದಿಮಂಗಳೂರಿನಿಂದ ಹೋಗುತ್ತಿದ್ದ ವೇಳೆ ಬಸ್ ನಲ್ಲೇ ಪ್ರಾಣ ಬಿಟ್ಟ ಯುವಕ

ಮಂಗಳೂರಿನಿಂದ ಹೋಗುತ್ತಿದ್ದ ವೇಳೆ ಬಸ್ ನಲ್ಲೇ ಪ್ರಾಣ ಬಿಟ್ಟ ಯುವಕ

spot_img
- Advertisement -
- Advertisement -

ಬಾಗಲಕೋಟೆ: ಊರಿಗೆ ಹೊರಟಿದ್ದ ಯುವಕನೊಬ್ಬ ಬಸ್​ನಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ. ಇಳಕಲ್ ತಾಲೂಕಿನ ಕರಡಿ ಗ್ರಾಮದ ಸುನೀಲ್ ಹನಮಗೌಡ ಪಾಟೀಲ(25) ಮೃತ ಯುವಕ.

ಮಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದ ಸುನೀಲ್ ಮಂಗಳೂರು-ಕರಡಿ ಮಾರ್ಗದ ಸಾರಿಗೆ ಬಸ್​ನಲ್ಲಿ ಸ್ವಗ್ರಾಮಕ್ಕೆ ಹೊರಟಿದ್ದ.  ಇಳಕಲ್ ಬಸ್ ನಿಲ್ದಾಣದಲ್ಲಿ ಬಸ್ ನಿಲ್ಲಿಸಿದಾಗ ಯುವಕ ಮೃತಪಟ್ಟಿರುವುದು ಗೊತ್ತಾಗಿದೆ.

ಅನಾರೋಗ್ಯ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವಾಪಸ್​ ಊರಿಗೆ ಹೋಗುತ್ತಿದ್ದ ಎನ್ನಲಾಗಿದೆ. ಹೆತ್ತವರ ಮಡಿಲು ಸೇರುವ ಮುನ್ನವೇ ಮಾರ್ಗದಲ್ಲೇ ಸಾವನ್ನಪ್ಪಿದ್ದಾನೆ. ಮಗನ ಸಾವಿನ ಸುದ್ದಿ ತಿಳಿದ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿತ್ತು.ಸ್ಥಳಕ್ಕೆ ಭೇಟಿ ನೀಡಿದ ಇಳಕಲ್ ಗ್ರಾಮೀಣ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

- Advertisement -
spot_img

Latest News

error: Content is protected !!