- Advertisement -
- Advertisement -
ಸುಳ್ಯ; ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬೆಳ್ಳಾರೆ ಸಮೀಪದ ನೆಟ್ಟಾರಿನಲ್ಲಿ ನಡೆದಿದೆ.
ನೆಟ್ಟಾರಿನ ಸುತ್ತುಕೋಟೆ ಸೀತಾರಾಮ ನಾಯ್ಕ (33) ಆತ್ಮಹತ್ಯೆ ಮಾಡಿಕೊಂಡವರು. ಸೀತಾರಾಮ ಅವರು ಮನೆ ಸಮೀಪದ ಗೇರುಮರಕ್ಕೆ ಬೈರಾಸಿನಿಂದ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದು ಜೂ.22 ರಂದು ಪತ್ತೆಯಾಗಿದೆ.
ಜೂ.21 ರಂದು ಬೆಳಿಗ್ಗೆ ಮನೆಯಿಂದ ಬೆಳ್ಳಾರೆ ಪೇಟೆಗೆ ಹೋಗಿ ಮನೆಗೆ ಬಂದವರು ಬಳಿಕ ಮದ್ಯಾಹ್ನ ನಂತರ ಮನೆಯಿಂದ ಕಾಣೆಯಾಗಿದ್ದರು. ಇಂದು ಅವರು ಆತ್ಮಹತ್ಯೆಗೆ ಶರಣಾಗಿರೋದು ಬೆಳಕಿಗೆ ಬಂದಿದೆ.ನಿನ್ನೆಯಿಂದ ಮನೆಯವರು ಹುಡುಕಾಡಿ ಇಂದು ಬೆಳಿಗ್ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ.
- Advertisement -