- Advertisement -
- Advertisement -
ಸುಬ್ರಹ್ಮಣ್ಯ; ಎದೆನೋವೆಂದು ಆಸ್ಪತ್ರೆಗೆ ದಾಖಲಾಗಿದ್ದ ಯುವಕ ಸಾವನ್ನಪ್ಪಿರುವ ಘಟನೆ ಪಂಜ ಸಮೀಪದ ಪಂಬೆತ್ತಾಡಿ ಗ್ರಾಮದ ಎದುರು ಮಜಲು ಎಂಬಲ್ಲಿ ನಡೆದಿದೆ.
ಮಹಾಲಿಂಗ ನಾಯ್ಕ ಮತ್ತು ಮಾಲತಿ ದಂಪತಿ ಪುತ್ರ ಜಗದೀಶ್ (33) ಮೃತ ಯುವಕ.
ಎರಡು ದಿನಗಳ ಹಿಂದೆ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಜಗದೀಶ್ ರನ್ನು ಮೊದಲು ಪುತ್ತೂರಿನ ಆಸ್ಪತ್ರೆಗೆ ದಾಖಲಿಸು ಬಳಿಕ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಾ.23 ರಂದು ಜಗದೀಶ್ (33) ಸಾವನ್ನಪ್ಪಿದ್ದಾರೆ.
ಮಾ.21 ರಂದು ಅವರಿಗೆ ತೀವ್ರವಾದ ಉಸಿರಾಟ ತೊಂದರೆ ಎದೆ ನೋವು ಕಾಣಿಸಿಕೊಂಡಿತು.ತಕ್ಷಣ ಅವರನ್ನು ಪುತ್ತೂರಿನ ಆಸ್ಪತ್ರೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಅವರು ಸಾವನ್ನಪ್ಪಿದ್ದಾರೆ.
- Advertisement -