Saturday, May 11, 2024
Homeಕರಾವಳಿಉಡುಪಿಸುಮೇಧ - ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ ವತಿಯಿಂದ "ವಿಶ್ವ ವಿಕಲಚೇತನರ ದಿನಾಚರಣೆ" ಕಾರ್ಯಕ್ರಮ

ಸುಮೇಧ – ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ ವತಿಯಿಂದ “ವಿಶ್ವ ವಿಕಲಚೇತನರ ದಿನಾಚರಣೆ” ಕಾರ್ಯಕ್ರಮ

spot_img
- Advertisement -
- Advertisement -

ನೀಲಾವರ: ಸುಮೇಧ – ಪ್ರಜ್ಞಾ ವಿಕಾಸ ಕೇಂದ್ರ ನೀಲಾವರ ವತಿಯಿಂದ “ವಿಶ್ವ ವಿಕಲಚೇತನರ ದಿನಾಚರಣೆ ” ಯನ್ನು ಆಚರಿಸಲಾಯಿತು.

ವಿಶ್ವಜನೀನ ಟ್ರಸ್ಟ್ , ಶ್ರೀ ಪೇಜಾವರ ಅಧೋಕ್ಷಜ ಮಠ , ಉಡುಪಿ ಇದರ ಅಂಗಸಂಸ್ಥೆ , ರೋಟರಿ ಕ್ಲಬ್ ಮಣಿಪಾಲ , ರೋಟರಿ ಉಡುಪಿ ವತಿಯಿಂದ ಜಂಟಿಯಾಗಿ ಶ್ರೀ ಪೇಜಾವರ ಅಧೋಕ್ಷಜ ಮಠದ ಶ್ರೀ ಶ್ರೀ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿಯವರ ದಿವ್ಯಾಶೀರ್ವಾದದೊಂದಿ ಇಂದು ಸುಮೇಧ – ಪ್ರಜ್ಞಾ ವಿಕಾಸ ಕೇಂದ್ರ ಡಾ.ಐ.ಆರ್. ಆಚಾರ್ಯ ಸ್ಮಾರಕ ವಿಶೇಷ ಮಕ್ಕಳ ಶಾಲೆ ಮತ್ತು ಪುನರ್ವಸತಿ ಕೇಂದ್ರ ನೀಲಾವರ , ಉಡುಪಿ ಇಲ್ಲಿ ಆಯೋಜಿಸಿದ ” ವಿಶ್ವ ವಿಕಲಚೇತನರ ದಿನಾಚರಣೆ ” ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ ರಘುಪತಿ ಭಟ್ ರವರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ದಾನಿಗಳಿಂದ ಕೊಡಮಾಡಿದ ಉಪಕರಣಗಳನ್ನು ಸಂಸ್ಥೆಗೆ ಹಸ್ತಾಂತರಿಸಿ ಬಳಿಕ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಎ.ವಿ ಬಾಳಿಗಾ ಆಸ್ಪತ್ರೆಯ ನಿರ್ದೇಶಕರಾದ ಪಿ.ವಿ ಭಂಡಾರಿ, ಮಣಿಪಾಲ ರೋಟರಿ ಕ್ಲಬ್ ಅಧ್ಯಕ್ಷರಾದ ವಿರೂಪಾಕ್ಷ ದೇವರಮನೆ ಹಾಗೂ ಇತರ ಸದಸ್ಯರು ಉಪಸ್ಥಿತರಿದ್ದರು.

- Advertisement -
spot_img

Latest News

error: Content is protected !!