- Advertisement -
- Advertisement -
ಪುತ್ತೂರು : ಮಹಿಳೆಯೊಬ್ಬರು ಒಲೆಯಲ್ಲಿ ಮಣ್ಣಿ ತಯಾರಿಸುತ್ತಿರುವ ವೇಳೆ ಅವರ ನೈಟಿಗೆ ಬೆಂಕಿ ತಾಗಿ ತೀವ್ರವಾಗಿ ಸುಟ್ಟು ಗಾಯಗೊಂಡಿದ್ದರು. ಅವರು ಚಿಕಿತ್ಸೆ ಫಲಿಸದೇ ಮೃತಪಟ್ಟ ಘಟನೆ ಪುತ್ತೂರು ತಾಲೂಕಿನ ಕಬಕ ಗ್ರಾಮದ ಪೆರಿಯತ್ತೋಡಿ ಎಂಬಲ್ಲಿ ನಡೆದಿದೆ .
ಮೃತರನ್ನು ಕಮಲ ( 59 ) ಎಂದು ಗುರುತಿಸಲಾಗಿದೆ . ಮಾ .4 ರಂದು ಮಧ್ಯಾಹ್ನ 1.30 ಗಂಟೆಗೆ ಕಮಲ ಅವರು ಮನೆಯಲ್ಲಿ ತಿನ್ನಲು ಮಣ್ಣಿ ತಯಾರಿಸುತ್ತಿರುವ ವೇಳಿ ಆಕಸ್ಮಿಕವಾಗಿ ನೈಟಿಗೆ ಬೆಂಕಿ ತಗುಲಿದೆ.
ಈ ವೇಳೆ ಮೈತುಂಬಾ ಬೆಂಕಿ ಹರಡಿ ಸುಟ್ಟು ಗಂಭೀರ ಗಾಯಗಳಾಗಿತ್ತು .ಅವರನ್ನು ಕೂಡಲೇ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು .
ಆದರೆ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ ಎಂಬ ಮಾಹಿತಿ ಕುಟುಂಬಸ್ಥರಿಂದ ಲಭ್ಯವಾಗಿದೆ.
- Advertisement -