- Advertisement -
- Advertisement -
ಸುಳ್ಯ: ಕಂದಕಕ್ಕೆ ಬಿದ್ದು ಕಾಡುಕೋಣ ಸಾವನ್ನಪ್ಪಿರುವ ಘಟನೆ ಮಂಡೆಕೋಲು ಗ್ರಾಮದ ಕೇನಾಜೆಯಲ್ಲಿ ನಡೆದಿದೆ.ತೋಟವೊಂದಕ್ಕೆ ಬಂದು ಮರಳಿ ಕಾಡಿಗೆ ಹೋಗುತ್ತಿದ್ದ ವೇಳೆ ತೋಟದಿಂದ ಹಾರಿದ ಕಾಡುಕೋಣ ಆನೆ,ಕಂದಕಕ್ಕೆ ಬಿದ್ದು ಉಸಿರುಗಟ್ಟಿ ಸಾವಿಗೀಡಾಗಿದೆ.
ಕುಸುಮಾಧರ ಮಾವಜಿಯವರ ತೋಟದಲ್ಲಿ ನಿನ್ನೆ ಸಂಜೆ ಸುಮಾರು 5.30 ರ ವೇಳೆಗೆ ಕಾಡುಕೋಣವೊಂದಿತ್ತು. ಅದು ತೋಟದಿಂದ ಕಾಡಿಗೆ ಹೋಗುತ್ತಿದ್ದ ವೇಳೆ ತೋಟ ಮತ್ತು ಕಾಡಿನ ಮಧ್ಯೆ ಮಾಡಲಾಗಿದ್ದ ಆನೆ ಕಂದಕವನ್ನು ಹಾರಿದೆ.
ಈ ವೇಳೆ ಆಯ ತಪ್ಪಿ ಕಾಡುಕೋಣ ಕಂದಕಕ್ಕೆ ಬಿದ್ದು ಅದರ ಕಾಲುಗಳು ಕಂದಕದಲ್ಲಿದ್ದ ಕೆಸರಿನಲ್ಲಿ ಹೂತು ಹೋಗಿತ್ತು. ಮುಖ ಕೂಡಾ ಗುದ್ದಿ ನಿಂತಿತು.ಅದಕ್ಕೆ ಮೇಲೆ ಏಳಲಾಗದೇ ಅದು ಅಲ್ಲೇ ಸಾವನ್ನಪ್ಪಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
- Advertisement -