Saturday, June 28, 2025
Homeತಾಜಾ ಸುದ್ದಿಬ್ರಹ್ಮಗಿರಿ ಬೆಟ್ಟ ಕುಸಿತ: ಮಣ್ಣು ಪಾಲಾಯ್ತಾ ಅರ್ಚಕರ ಮನೆಯಲ್ಲಿದ್ದ ಕೆಜಿಗಟ್ಟಲೆ ಚಿನ್ನ?

ಬ್ರಹ್ಮಗಿರಿ ಬೆಟ್ಟ ಕುಸಿತ: ಮಣ್ಣು ಪಾಲಾಯ್ತಾ ಅರ್ಚಕರ ಮನೆಯಲ್ಲಿದ್ದ ಕೆಜಿಗಟ್ಟಲೆ ಚಿನ್ನ?

spot_img
- Advertisement -
- Advertisement -

ಮಡಿಕೇರಿ: ಕೊಡಗು ಜಿಲ್ಲೆಯ ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತದಲ್ಲಿ ಸಿಲುಕಿಕೊಂಡಿರುವ ಅರ್ಚಕರು ಮತ್ತು ಮನೆಯವರ ಹುಡುಕಾಟದ ಕಾರ್ಯಾಚರಣೆ ನಡೆಯುತ್ತಲೇ ಇದೆ. ಈ ಮಧ್ಯೆ ಘಟನೆ ಸಂಬಂಧ ಪಟ್ಟಂತೆ ಸ್ಥಳೀಯರಲ್ಲಿ ಬಿಸಿ ಬಿಸಿ ಚರ್ಚೆ ಶುರುವಾಗಿದೆ. ಅರ್ಚಕ ನಾರಾಯಣ ಆಚಾರ್‌ ಮನೆಯಲ್ಲಿ ಅಪಾರ ಪ್ರಮಾಣದ ನಾಣ್ಯಗಳು ಪತ್ತೆಯಾಗಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ.

ನಾರಾಯಣ ಆಚಾರ್‌ ಆಗರ್ಭ ಶ್ರೀಮಂತರಾಗಿದ್ದು, ಅವರು 100 ಎಕರೆ ಕಾಫಿ ತೋಟದ ಒಡೆಯರಾಗಿದ್ರು. ಇನ್ನು ಆಚಾರ್‌ರ ಮನೆಯ 1 ಕೋಣೆಯಲ್ಲಿ ಲಕ್ಷಾಂತರ ರೂಪಾಯಿ ಮೌಲ್ಯದ ನಾಣ್ಯಗಳು ಮತ್ತು ಚಿನ್ನ, ನಗದು ಇತ್ತು ಎಂಬ ಮಾಹಿತಿ ಸಿಕ್ಕಿದೆ. ಹಾಗಾಗಿ ಕೆಜಿಗಟ್ಟಲೇ ಇದ್ದ ಚಿನ್ನ ಮಣ್ಣುಪಾಲಾಯ್ತ ಅನ್ನೋ ಅನುಮಾನ ಶುರುವಾಗಿದೆ. ಅಲ್ಲದೇ ಮನೆಯಲ್ಲಿ ಸಿಕ್ಕ ನಾಣ್ಯಗಳು, ಬ್ರಹ್ಮಕಂಡಿಕೆಗೆ ಹಾಕುತ್ತಿದ್ದ ನಾಣ್ಯಗಳನ್ನ ನಾರಾಯಣ ಆಚಾರ್‌ ಮನೆಗೆ ಕೊಂಡೊಯ್ಯುತ್ತಿದ್ದರಾ
ಎಂಬ ಸಂಶಯಕ್ಕೆ ಕಾರಣವಾಗಿದೆ.

ಈ ನಡುವೆ ಘಟನೆ ಸ್ಥಳಕ್ಕೆ ಭೇಟಿ ನೀಡಿದ ಉಸ್ಯವಾರಿ ಸಚಿವ ವಿ.ಸೋಮಣ್ಣ ಮೃತದೇಹ ಸಿಗುವವರೆಗೆ ಕಾರ್ಯಾಚರಣೆ ಸಾಗಲಿದ್ದು, ಯಾವುದೇ ಕಾರಣಕ್ಕೂ ನಿಲ್ಲಿಸೋಲ್ಲ ಎಂದು ಹೇಳಿದ್ದಾರೆ.

 

- Advertisement -
spot_img

Latest News

error: Content is protected !!