- Advertisement -
- Advertisement -
ಮಂಡ್ಯ : ಅಯೋಧ್ಯೆಯಲ್ಲಿ ಇಂದು ರಾಮಮಂದಿರ ಶಿಲಾನ್ಯಾಸ ಕಾರ್ಯಕ್ರಮ ನೆರವೇರಿದೆ. ಇಡೀ ದೇಶವೇ ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಯಿತು. ಇನ್ನು ಇದೇ ಖುಷಿಗಾಗಿ ಒಳ್ಳೆ ಹುಡ್ಗ ಪ್ರಥಮ್ ಏನ್ ಮಾಡಿದ್ದಾರೆ ಗೊತ್ತಾ..
ಮಂಡ್ಯ ಸಮೀಪದ ಪುಟ್ಟ ಹಳ್ಳಿಯ ತೀರ ಬಡ ಜನರಿಗೆ ಅತ್ಯುತ್ತಮ ಗುಣಮಟ್ಟದ ಕನಿಷ್ಟ 19 ವಸ್ತುಗಳಿರುವ ಇರೋ ರೇಷನ್ ಕಿಟ್ ನ್ನು ವಿತರಿಸಿದ್ದಾರೆ. ಹಾಗೇ ಮಧ್ಯಮ ವರ್ಗದವರಿಗೆ 6 ವಸ್ತುಗಳಿರುವ ಕಿಟ್ ನ್ನು ವಿತರಿಸಿದ್ದಾರೆ. ಈ ಬಗ್ಗೆ ಪ್ರಥಮ್ ಫೇಸ್ ಬುಕ್ ನಲ್ಲಿ ಪೋಸ್ಟ್ ಹಾಕೊಂಡಿದ್ದು, ನೀವೂ ಕೂಡ ನಿಮ್ಮ ಸುತ್ತಮುತ್ತಲಿನ ಜನರಿಗೆ ಕೈಲಾದ್ದು ಮಾಡಿ…! ಎಂದು ಮನವಿ ಮಾಡಿಕೊಂಡಿದ್ದಾರೆ. ಇನ್ನು ಲಾಕ್ ಡೌನ್ ಸಮಯದಲ್ಲೂ ಪ್ರಥಮ ಸಾಕಷ್ಟು ಮಂದಿಗೆ ಸಹಾಯ ಮಾಡಿದ್ದರು.
- Advertisement -