- Advertisement -
- Advertisement -
ಬೆಂಗಳೂರು: ನಾಳೆಯ ಮುಷ್ಕರ ವಾಪಸ್ಸು ಪಡೆಯುವ ಪ್ರಶ್ನೆ ಇಲ್ಲ ಅಂತ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಜೊತೆ ಸಭೆಯ ಬಳಿಕ ಸರ್ಕಾರಿ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ತಿಳಿಸಿದ್ದಾರೆ.
ಇದೇ ವೇಳೆ ಅವರು ಸಿಎಸ್ಗೆ ವಾಪಸ್ಸು ಪಡೆಯುವ ಪ್ರಶ್ನೆ ಇಲ್ಲ ಅಂತ ತಿಳಿಸಿದ್ದು, ನಮ್ಮಲ್ಲಿ ಪದಾಧಿಕಾರಿಗಳಲ್ಲಿ ಯಾವುದೇ ಮನಸ್ತಾಪ ಇಲ್ಲ, ನೌಕರರ ವಿರುದ್ದ ನಾವು ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಹೀಗಾಗಿ ಈ ಹಿಂದಿನ ಕರೆಯಂತೆ ಸ್ಟೈಕ್ ನಡೆಸಲಾಗುವುದು ಅಂತ ತಿಳಿಸಿದರು.
ಇದಲ್ಲದೇ ವೇತನ ಹೆಚ್ಚಳಕ್ಕೆ ಸಂಬಂಧಪಟ್ಟಂತೆ ಯಾವುದೇ ಸೂಚನೆಯನ್ನು ನಮಗೆ ನೀಡಿಲ್ಲ, ಬಜೆಟ್ನಲ್ಲಿ ಈ ಬಗ್ಗೆ ಕೂಡ ಹೇಳಿಲ್ಲ, ಸರ್ಕಾರ ನಮಗೆ ಮೋಸ ಮಾಡುತ್ತಿದೆ ಅಂತ ತಿಳಿಸಿದ್ದಾರೆ.
- Advertisement -