- Advertisement -
- Advertisement -
ಬೆಳ್ತಂಗಡಿ : ಅಪಘಾತದ ಪ್ರಕರಣದಲ್ಲಿ ಶಿಕ್ಷೆಗೊಳಗಾಗಿ ತಲೆಮರೆಸಿಕೊಂಡಿದ್ದ ಆರೋಪಿ 20 ವರ್ಷಗಳ ಬಳಿಕ ಅರೆಸ್ಟ್ ಆಗಿದ್ದಾನೆ. ಪುತ್ತೂರಿನ ಜಡೆಕಲ್ಲು ನಿವಾಸಿ ಅಬ್ದುಲ್ ರಹಿಮಾನ್ (50) ಬಂಧಿತ ಆರೋಪಿ.
ಈತನನ್ನು ದಿನಾಂಕ 14 /10/2024 ರಂದು ಬೆಳ್ತಂಗಡಿ ಪೊಲೀಸ್ ಠಾಣಾ ನಿರೀಕ್ಷಕರು ಬಿ ಜಿ ಸುಬ್ಬಾಪೂರ್ ಮಠ, ಉಪ ನೀರಿಕ್ಷಕರು ಮುರಳೀಧರ್ ಮತ್ತು ಯಲ್ಲಪ್ಪ ರವರ ನಿರ್ದೇಶನದಂತೆ ಠಾಣಾ ಹೆಚ್ ಸಿ 418 ವ್ರಷಭ ಮತ್ತು ಪಿಸಿ 2398 ಮುನಿಯ ನಾಯ್ಕ್, ರವರು ಪೂತ್ತೂರ್ ನಿಂದ ದಸ್ತಗಿರಿ ಮಾಡಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದು ನ್ಯಾಯಾಂಗ ಬಂಧನ ವಿಧಿಸಿ ಮಂಗಳೂರ್ ಜೈಲಿಗೆ ನೀಡಿರುತ್ತಾರೆ.ಈತನ ಪತ್ತೆ ಬಗ್ಗೆ ಪೂತ್ತೂರ್ ನಗರ ಎ.ಎಸ್.ಐ ಪರಮೇಶ್ವರ್ ರವರು ಸಹಕರಿಸಿರುತ್ತಾರೆ.
- Advertisement -