- Advertisement -
- Advertisement -
ಬೆಂಗಳೂರು: ಕಾಂಗ್ರೆಸ್ ಪಕ್ಷವು ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಈ ಎರಡೂ ಜಿಲ್ಲೆಗಳಲ್ಲಿ ಹತ್ತು ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತೆ. ಕರಾವಳಿ ಭಾಗದಲ್ಲಿ ಗೆಲುವಿಗಾಗಿ ಪಕ್ಷ ಕಾರ್ಯತಂತ್ರ ರೂಪಿಸಿದೆ ಎಂದರು. ಹಾಗೇ ಕರಾವಳಿಯಲ್ಲಿ ಸರಣಿ ಹತ್ಯೆಗಳಾದಾಗ ಬಿಜೆಪಿಯವರ ವಿರುದ್ಧವೇ ಪ್ರತಿಭಟನೆ ನಡೆದಿವೆ. ಬಿಜೆಪಿ ನಾಯಕರ ಮಕ್ಕಳ್ಯಾರೂ ಹಿಂದುತ್ವದ ಹೋರಾಟದಲ್ಲಿ ಬಲಿಯಾಗಿಲ್ಲ. ಬಡವರ ಮಕ್ಕಳಷ್ಟೇ ಈ ಹೋರಾಟದಲ್ಲಿ ಬಲಿಯಾಗ್ತಿದ್ದಾರೆ ಎಂದರು.
- Advertisement -