- Advertisement -
- Advertisement -
ಕಡಬ: ಇಲ್ಲಿನ ಮೆಸ್ಕಾಂ ಜೆ.ಇ ಆಗಿ ವಸಂತ ಕುಮಾರ್ ಟಿ.ಎಂ ಅವರು ಅಧಿಕಾರ ಸ್ವೀಕರಿಸಿದರು. ಅವರು ಈ ಮೊದಲು ಹರಿಹರ ಪಲ್ಲತ್ತಡ್ಕದಲ್ಲಿ ಕಳೆದ 12 ವರ್ಷಗಳಿಂದ ಗ್ರೇಡ್ ಸೆಕೆಂಡ್ ಲೈನ್ ಮೆಕ್ಯಾನಿಕ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಎ.ಇ.ಇ ಸಜಿಕುಮಾರ್ ಮತ್ತು ಎ.ಇ ಸತ್ಯನಾರಾಯಣ ಸಿ.ಕೆ ಅಧಿಕಾರ ಹಸ್ತಾಂತರ ಮಾಡಿದರು. ಈ ಸಂದರ್ಭದಲ್ಲಿ ಅಸಿಸ್ಟೆಂಟ್ ಲೆಕ್ಕಾಧಿಕಾರಿ ಕೃಷ್ಣ ಮೂರ್ತಿ ಮತ್ತು ಕಡಬ ಉಪವಿಭಾಗದ ಬಿಳಿನೆಲೆ, ಆಲಂಗಾರು, ನೆಲ್ಯಾಡಿಯ ಎಲ್ಲಾ ಶಾಖಾ ಅಧಿಕಾರಿಗಳು ಮತ್ತು ಉಪವಿಭಾಗದ ಸಿಬ್ಬಂದಿಗಳು ಉಪಸ್ಥಿತರಿದ್ದರು.
- Advertisement -