- Advertisement -
- Advertisement -
ಮಂಗಳೂರು: ಕೇಂದ್ರದ ಪಾಲಿಸ್ಟರ್ ಧ್ವಜ ಬಳಕೆ ನಿರ್ಧಾರ ಸ್ವಾತಂತ್ರ್ಯ ಆಂದೋಲನಕ್ಕೆ ಮಾಡಿದ ಅವಮಾನ ಎಂದು ವಿಪಕ್ಷ ನಾಯಕ ಯು.ಟಿ.ಖಾದರ್ ಹರಿಹಾಯ್ದಿದ್ದಾರೆ.
ಇಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಷ್ಟ್ರಧ್ವಜ ಬರೀ ಬಟ್ಟೆಯಲ್ಲ, ಖಾದಿ ಈ ದೇಶದ ತಾಯಿ ಬೇರು. ವಿದೇಶದಿಂದ ಪಾಲಿಸ್ಟರ್ ತಂದು ಗುಡ್ಡೆ ಹಾಕುವುದು ಸರಿಯಲ್ಲ ಅಂತ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ರು.
ಪಾಲಿಸ್ಟರ್ ವಿದೇಶದಿಂದ ಅಮದಿಗೆ ಅವಕಾಶ ಕೊಡಲಾಗಿದೆ, ಇದರಿಂದ ಚೀನಾಗೆ ಲಾಭ ತಂದಿದೆ. ಸ್ಪಷ್ಟತೆ ಇಲ್ಲದ ಈ ನಿರ್ಧಾರ ಇಡೀ ದೇಶಕ್ಕೆ ಅವಮಾನ. ಕೇಂದ್ರ ಇದನ್ನ ಪುನರ್ ಪರಿಶೀಲಿಸಿ ಖಾದಿಗೆ ಮಹತ್ವ ಕೊಡಲಿ ಅಂತ ಹೇಳಿದ್ದಾರೆ.
- Advertisement -