Sunday, May 5, 2024
Homeಕರಾವಳಿಬೆಳ್ತಂಗಡಿ: ಅಂತರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಉರುವಾಲು ಶ್ರೀ ಭಾರತಿ ಶಾಲೆಯ ವಿದ್ಯಾರ್ಥಿ ಯಜ್ಞೇಶ್ ಗೆ ಬಹುಮಾನ

ಬೆಳ್ತಂಗಡಿ: ಅಂತರಾಷ್ಟ್ರೀಯ ಕರಾಟೆ ಪಂದ್ಯಾಟದಲ್ಲಿ ಉರುವಾಲು ಶ್ರೀ ಭಾರತಿ ಶಾಲೆಯ ವಿದ್ಯಾರ್ಥಿ ಯಜ್ಞೇಶ್ ಗೆ ಬಹುಮಾನ

spot_img
- Advertisement -
- Advertisement -

ಬೆಳ್ತಂಗಡಿ: ಆಗಸ್ಟ್ 20 ರಿಂದ 21ರ ವರೆಗೆ  ಶಿವಮೊಗ್ಗದಲ್ಲಿ ನಡೆದ ಶಿವಮೊಗ್ಗ ಓಪನ್ 3 ನೇ ಅಂತರಾಷ್ಟ್ರೀಯ ಕರಾಟೆ ಪಂದ್ಯಾಟ -2022ದಲ್ಲಿ ಉರುವಾಲು ಶ್ರೀ ಭಾರತಿ ಆಂಗ್ಲಮಾಧ್ಯಮ ಶಾಲೆಯ 5ನೇ  ತರಗತಿಯ ಬಂದಾರು ಗ್ರಾಮದ ಮೈರೋಳ್ತಡ್ಕ ಚಾಕೋಟೆದಡಿ ಪ್ರೇಮಲತಾ ಮತ್ತು ಗಣೇಶ್ ದಂಪತಿಯ ಪುತ್ರ ಯಜ್ಞೇಶ್ ಭಾಗವಹಿಸಿ 10 ರಿಂದ 12 ನೇ ವರ್ಷದ ವಯೋಮಿತಿಯ ಕಟಾ ವಿಭಾಗದಲ್ಲಿ ದ್ವೀತಿಯ , ಕುಮಿತೆ ವಿಭಾಗದಲ್ಲಿ ತೃತೀಯ ಸ್ಥಾನ ಪಡೆದು ಶಾಲೆಗೆ,ತಾಲೂಕಿಗೆ ಕೀರ್ತಿ ತಂದಿದ್ದಾನೆ.

ಈತನಿಗೆ ಕರಾಟೆ ನಿರ್ದೇಶಕ ಹಾಗೂ ಮುಖ್ಯ ಶಿಕ್ಷಕ ಶಿಹಾನ್ ವಸಂತ‌ ಕೆ.ಬಂಗೇರ ತರಬೇತಿ ನೀಡುತ್ತಿದ್ದಾರೆ.ಬಾಲಕ ಇನ್ನಷ್ಟು ಸಾಧನೆ ಮಾಡಲಿ ಅನ್ನೋದೇ ನಮ್ಮ ಆಶಯ.

- Advertisement -
spot_img

Latest News

error: Content is protected !!