- Advertisement -
- Advertisement -
ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಾಲಯದ ಬಸವ ಹೃದಯಾಘಾತದಿಂದ ಶನಿವಾರ ಮೇ 17 ರಂದು ಮಧ್ಯಾಹ್ನದ ವೇಳೆ ಮೃತಪಟ್ಟಿದೆ.
ಈ ಬಸವ ದೇವಾಲಯದ ಉತ್ಸಾವಾದಿ ಕಾರ್ಯಗಳಲ್ಲಿ ಬೆಳ್ಳಿ ಆಭರಣಗಳನ್ನು ಧರಿಸಿ ದೇವರ ಮುಂದೆ ಸಾಗುತ್ತಿದ್ದ ದೃಶ್ಯವೇ ಮನಮೋಹಕವಾಗಿದ್ದು, ಭಕ್ತಾದಿಗಳ ಆಕರ್ಷಣೆಗೆ ಒಳಗಾಗಿತ್ತು. ನಿನ್ನೆ ಎಂನಂತೆಯೇ ಲವಲವಿಕೆಯಲ್ಲಿದ್ದ ಬಸವ ಮಧ್ಯಾಹ್ನ 12.00 ಗಂಟೆ ಸುಮಾರಿಗೆ ಕುಸಿದು ಬಿದ್ದು ಸಾವನ್ನಪ್ಪಿದೆ. ಭೀಮಗಾತ್ರದ ಈ ಬಸವನ ಮೃತ ದೇಹವನ್ನು ಕ್ರೇನ್ ಸಹಾಯದಿಂದ ಸ್ಥಳಾಂತರಿಸಿ ಅಂತ್ಯ ಸಂಸ್ಕಾರ ನಡೆಸಲಾಯಿತು.
- Advertisement -