ಉಡುಪಿ: ತಂದೆಯ ಸ್ನೇಹಿತನೆಂದು ಕರೆ ಮಾಡಿ ನಂಬಿಸಿ ಯುವಕನೊಬ್ಬನಿಗೆ 2 ಲಕ್ಷ ರೂಪಾಯಿ ವಂಚಿಸಿರುವ ಘಟನೆ ಮಣಿಪಾಲದಲ್ಲಿ ನಡೆದಿದೆ. ಯುವಕನಿಗೆ ಕರೆ ಮಾಡಿದ ಅಪರಿಚಿತ ವ್ಯಕ್ತಿ ಪೇಟಿಯಂ ಮೂಲಕ ಹಣ 2 ಲಕ್ಷ ರೂ.ಗಳಿಗೂ ಅಧಿಕ ಹಣವನ್ನು ಹಂತಹಂತವಾಗಿ ವರ್ಗಾಯಿಸಿಕೊಂಡು ವಂಚಿಸಿದ್ದಾನೆ.
ಮಣಿಪಾಲ ಹಾಸ್ಟೆಲ್ ವಾಸಿಯಾದನಲ್ಲಿರುವ ಚಿತ್ರಾಂಗ್ ಜುನಿವಾಲ್ ಎಂಬವರಿಗೆ 2022ರ ಡಿ.25ರಂದು ಅಪರಿಚಿತ ವ್ಯಕ್ತಿ ಮೊಬೈಲ್ ನಲ್ಲಿ ಕರೆ ಮಾಡಿ, ‘ನಾನು ನಿಮ್ಮ ಅಂಕಲ್, ನಿನ್ನ ತಂದೆ ನನಗೆ ನಂಬರ್ ಕೊಟ್ಟಿರುವುದಾಗಿ ಹೇಳಿ, ನಿಮ್ಮ ಖಾತೆಗೆ ತಪ್ಪಾಗಿ 25,000ರೂ ಹಣ ಡೆಪಾಸಿಟ್ ಆಗಿದೆ. ಅದನ್ನು ಕೂಡಲೇ ಪೇಟಿಎಂ ಮೂಲಕ ಹಿಂದಿರುಗಿಸು’ ಎಂದು ತಿಳಿಸಿದ್ದು, ಚಿತ್ರಾಂಗ್ ಜುನಿವಾಲ್ ಆತ ತಂದೆಯ ಸ್ನೇಹಿತರೆಂದು ತಿಳಿದು, ಆತನು ಸೂಚಿಸಿದ ನಂಬರಿಗೆ ಪೇಟಿಯಂ ಮೂಲಕ 24,500 ರೂ. ಹಣ ವರ್ಗಾವಣೆ ಮಾಡಿದ್ದನು. ಆದರೆ ಆ ಹಣ ಖಾತೆಗೆ ಜಮೆ ಆಗಿಲ್ಲ ಎಂದು ಅಪರಿಚಿತ ವ್ಯಕ್ತಿ ಚಿತ್ರಾಂಗ್ ಜುನಿವಾಲ್ಗೆ ಪದೇ ಪದೇ ಕರೆ ಮಾಡಿ, ಡಿ.25ರಿಂದ ಡಿ.27ರ ಮಧ್ಯಾವದಿಯ ಎರಡು ದಿನದಲ್ಲಿ ಒಟ್ಟು 2 ಲಕ್ಷ 13 ಸಾವಿರದ 999 ರೂ. ಹಣವನ್ನು ವರ್ಗಾವಣೆ ಮಾಡಿಸಿಕೊಂಡು ವಂಚಿಸಿದ್ದಾನೆ.ಈ ಬಗ್ಗೆ ಉಡುಪಿ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.