- Advertisement -
- Advertisement -
ಬೆಳ್ತಂಗಡಿ; ಮೊನ್ನೆ ಬೆಳಾಲು ಕೂಡಿಗೆ ನೇತ್ರಾವತಿ ನದಿಯಲ್ಲಿ ಪತ್ತೆಯಾದ ಅಪರಿಚಿತ ಮಹಿಳೆಯ ಮೃತದೇಹದ ಪೋಸ್ಟ್ ಮೊರ್ಟಮ್ ಇಂದು ದೇರಳಕಟ್ಟೆ ಆಸ್ಪತ್ರೆಯಲ್ಲಿ ನಡೆಯಿತು.
ಬಳಿಕ ಆ ಶವದ ದಫನ ಕಾರ್ಯವನ್ನು ಬೆಳಾಲು ಗ್ರಾಮ ಪಂಚಾಯತ್ ದಫನ ಭೂಮಿಯಲ್ಲಿ ನಡೆಸಿಕೊಡುವಂತೆ ಬೆಳಾಲು PDO ರವರು ಮತ್ತು ಧರ್ಮಸ್ಥಳ ಠಾಣಾ ಪೊಲೀಸರು ಬೆಳಾಲು ಶೌರ್ಯ ವಿಪತ್ತು ಘಟಕದ ಸದಸ್ಯ ಸುಲೈಮಾನ್ ರವರಲ್ಲಿ ಕೇಳಿಕೊಂಡರು. ಅವರು ಈ ವಿಚಾರವನ್ನು ಘಟಕದ ಸಂಯೋಜಕರಾಗಿರುವ ಆಶಾರವರ ಗಮನಕ್ಕೆ ತಂದಿದ್ದಾರೆ.
ಅದರಂತೆ ಘಟಕದ ಸದಸ್ಯರಾದ ಹರೀಶ್ ಕೂಡಿಗೆ, ಸುಲೈಮಾನ್ ಭೀಮಂಡೆ, ಸಂಜೀವ ಕೋಲ್ಪಾಡಿ, ಯಶೋಧರ ಮಂಡಾಲು,ಜಗದೀಶ್ ಸುರುಳಿ ಅವರು ಸೇರಿಕೊಂಡು ಶವದ ದಫನ ಕಾರ್ಯವನ್ನು ನೆರವೇರಿಸಿ ಮಾನವೀಯತೆ ಮೆರೆದಿದ್ದಾರೆ.
- Advertisement -