Saturday, April 27, 2024
Homeಕರಾವಳಿಕಾಂತಾರ ಸಿನಿಮಾವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಿ: ಹೂಡಿಕೆದಾರರಿಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕಿವಿಮಾತು

ಕಾಂತಾರ ಸಿನಿಮಾವನ್ನು ಸ್ಫೂರ್ತಿಯಾಗಿ ತೆಗೆದುಕೊಳ್ಳಿ: ಹೂಡಿಕೆದಾರರಿಗೆ ಕೇಂದ್ರ ಸಚಿವ ಪಿಯೂಶ್ ಗೋಯಲ್ ಕಿವಿಮಾತು

spot_img
- Advertisement -
- Advertisement -

ಬೆಂಗಳೂರು: ಸದ್ಯ ಕಾಂತಾರ ಸಿನಿಮಾದ್ದೇ ಅಬ್ಬರ. ಎಲ್ಲೆಲ್ಲೂ ಈ ಚಿತ್ರದ್ದೇ ಮಾತು. ವಿಶೇಷ ಅಂದ್ರೆ ಬೆಂಗಳೂರಿನಲ್ಲಿ ನಡೆದ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲೂ ಈ ಚಿತ್ರದ ಬಗ್ಗೆ ಮಾತುಗಳನ್ನಾಡಲಾಗಿದೆ.

ಹೌದು, ಕೇಂದ್ರ ಸಚಿವ ಪಿಯೂಶ್ ಗೋಯಲ್ ಕಾಂತಾರ ಸಿನಿಮಾವನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳುವಂತೆ ಹೂಡಿಕೆದಾರರಿಗೆ ಹೇಳಿದ್ದಾರೆ. ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶದಲ್ಲಿ ಮಾತನಾಡಿದ ಕೇಂದ್ರ ಸಚಿವ ಪಿಯೂಶ್ ಗೋಯಲ್, ‘ಕಾಂತಾರ ಸಿನಿಮಾವನ್ನು ಉಲ್ಲೇಖ ಮಾಡಿದ್ದಲ್ಲದೇ, ಚಿತ್ರವನ್ನು ಹೊಗಳಿದರು. ಇದೊಂದು ಸಣ್ಣ ಬಂಡವಾಳದಲ್ಲಿ ನಿರ್ಮಿಸಿದ ಚಿತ್ರ. ಸೂಪರ್ ಹಿಟ್ ಆಗಿದೆ. ಬ್ಲಾಕ್ ಬಸ್ಟರ್ ಚಿತ್ರ ಎನಿಸಿಕೊಂಡಿದೆ. ನೂರಾರು ಕೋಟಿ ಬಿಸ್ನೆಸ್ ಮಾಡಿದೆ’ ಎಂದು ಅವರು ಉಲ್ಲೇಖಿಸಿದರು. ಕಾಂತಾರ ಚಿತ್ರವನ್ನು ನಾನೂ ವೀಕ್ಷಿಸಿದ್ದೇನೆ. ತುಂಬಾ ಚೆನ್ನಾಗಿ ಮೂಡಿ ಬಂದಿದೆ. ಸ್ಥಳಿಯ ಕಥೆಯನ್ನೇ ಜಾಗತಿಕ ಮಟ್ಟದಲ್ಲಿ ಹೇಳುವಂತೆ ಸಿನಿಮಾವನ್ನು ಕಟ್ಟಿಕೊಟ್ಟಿದ್ದಾರೆ’ ಎಂದು ವಿವರಿಸಿದರು.

- Advertisement -
spot_img

Latest News

error: Content is protected !!