- Advertisement -
- Advertisement -
ಹುಬ್ಬಳ್ಳಿ: ಆರು ದಿನಗಳ ಹಿಂದೆ ನಡೆದಿದ್ದ ಮಾಜಿ ಸಚಿವ ಉಮಾಶ್ರೀ ಅವರಿಗೆ ಸೇರಿದ ಇನ್ನೋವಾ ಮತ್ತು ಬೊಲೆನೋ ಕಾರುಗಳ ನಡುವಿನ ಮುಖಾಮುಖಿ ಅಪಘಾತದಲ್ಲಿ ಡಾ. ಸ್ಮಿತಾ ಕಟ್ಟಿದ ಗಂಭೀರ ಗಾಯಗೊಂಡಿದ್ದರು.ಆಸ್ಪತ್ರೆಯಲ್ಲಿದ್ದ ನವಲಗುಂದ ತಾಲೂಕ ಬೆಳೆಹಾರ ಗ್ರಾಮದ ಆರೋಗ್ಯಾಧಿಕಾರಿ ಡಾ. ಸ್ಮಿತಾ ಕಟ್ಟಿದ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ.
ಗದಗನಿಂದ ಹುಬ್ಬಳ್ಳಿಗೆ ಬರುತ್ತಿದ್ದ ಬೊಲೆನೋ ಕಾರಿಗೆ ಉಮಾಶ್ರೀ ಮಾಲಿಕತ್ವದ ಇನ್ನೋವಾ ಕಾರು ಡಿಕ್ಕಿ ಹೊಡೆದಿತ್ತು. ಸ್ಥಳದಲ್ಲಿಯೇ ವಾಹನ ಚಾಲಕ ಸಂದೀಪ ವಿಭೂತಿಮಠ ಮತ್ತು ಡಾ. ಸ್ಮಿತಾ ತಾಯಿ ಶೋಭಾ ಮೃತಪಟ್ಟಿದ್ದರು. ಸ್ಮಿತಾ ಸೇರಿದಂತೆ ಇನ್ನೊವಾ ಚಾಲಕ ಶಿವಕುಮಾರ ಬಿಡನಾಳ ಗಾಯಗೊಂಡಿದ್ದರು. ಮಾಜಿ ಸಚಿವೆ ಉಮಾಶ್ರೀ ಅವರು ಡಾ. ಸ್ಮಿತಾ ಸಾವಿಗೆ ತೀವ್ರ ಸಂತಾಪ ವ್ಯಕ್ತ ಪಡಿಸಿದ್ದಾರೆ.
- Advertisement -