Wednesday, June 26, 2024
Homeಕರಾವಳಿಮಂಗಳೂರು: ಪೊಲೀಸರ ಬೈಕಿನಲ್ಲೇ ಕೊಲೆ ಯತ್ನದ ಆರೋಪಿ ಎಸ್ಕೇಪ್.!

ಮಂಗಳೂರು: ಪೊಲೀಸರ ಬೈಕಿನಲ್ಲೇ ಕೊಲೆ ಯತ್ನದ ಆರೋಪಿ ಎಸ್ಕೇಪ್.!

spot_img
- Advertisement -
- Advertisement -

ಉಳ್ಳಾಲ: ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದವನೊಬ್ಬ ಕೆಲ ತಿಂಗಳ ಬಳಿಕ ಪೊಲೀಸರಿಗೆ ಸಿಕ್ಕಿಬಿದ್ದಿದ್ದು, ವಿಚಾರಣೆ ವೇಳೆ ತನ್ನೊಂದಿಗಿದ್ದ ಮತ್ತೊಬ್ಬನ ಮಾಹಿತಿ ನೀಡುವುದಾಗಿ ತಿಳಿಸಿ ಪೊಲೀಸರು ಕರೆದುಕೊಂಡು ಹೋದಾಗ ಅವರಿಗೆ ಚಳ್ಳೆಹಣ್ಣು ತಿನ್ನಿಸಿ ಅವರ ಬೈಕಿನಲ್ಲೇ ಪರಾರಿಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ.

ಉಳ್ಳಾಲದ ಆರೋಪಿ ಕೊಲೆ ಯತ್ನದ ಬಳಿಕ ತನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗುತ್ತಿದ್ದಂತೆ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ. ರಂಜಾನ್ ಗಾಗಿ ಈತ ಉಳ್ಳಾಲಕ್ಕೆ ಬಂದಿದ್ದು, ಇದರ ಮಾಹಿತಿ ತಿಳಿದ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ವಿಚಾರಣೆ ವೇಳೆ ತನ್ನೊಂದಿಗಿದ್ದ ಮತ್ತೊಬ್ಬನ ಮಾಹಿತಿ ನೀಡುವುದಾಗಿ ಈತ ತಿಳಿಸಿದ್ದಾನೆ.

ಈತನ ಮಾತನ್ನು ನಂಬಿದ ಪೊಲೀಸರು ಒಂದು ಬೈಕಿನಲ್ಲಿ ಆರೋಪಿಯನ್ನು ಮಧ್ಯ ಕೂರಿಸಿಕೊಂಡು ಹಿಂದೆ ಮುಂದೆ ಒಬ್ಬೊಬ್ಬರು ಕೂತಿದ್ದಾರೆ. ಹೀಗೆ ಹೋಗುವಾಗ ಮಾರ್ಗ ಮಧ್ಯದಲ್ಲಿ ವ್ಯಕ್ತಿಯೊಬ್ಬನನ್ನು ತೋರಿಸಿ ಈತನೇ ನನ್ನೊಂದಿಗಿದ್ದವನು ಎಂದು ಹೇಳಿದ್ದಾನೆ. ಆಗ ಬೈಕಿನಲ್ಲಿದ್ದ ಇಬ್ಬರು ಪೊಲೀಸರು ಕೀ ಅಲ್ಲೇ ಬಿಟ್ಟು ಆತನನ್ನು ಹಿಡಿಯಲು ಹೋಗಿದ್ದಾರೆ.

ಇದೇ ಸಂದರ್ಭ ಸಾಧಿಸಿದ ಆರೋಪಿ ಪೊಲೀಸರ ಬೈಕ್ ಸ್ಟಾರ್ಟ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಅವನುತೋರಿಸಿದ ವ್ಯಕ್ತಿಯನ್ನು ಹಿಡಿದ ಪೊಲೀಸರಿಗೆ ಆತ ಆರೋಪಿಯಲ್ಲ ಎಂದು ತಿಳಿದುಬಂದಿದೆ. ಇದೀಗ ಆರೋಪಿ ಅಬ್ಬಕ್ಕ ವೃತ್ತದ ಬಳಿ ಬೈಕ್ ಬಿಟ್ಟುಹೋಗಿದ್ದು, ಕೈಗೆ ಸಿಕ್ಕ ಆರೋಪಿಯನ್ನು ಪರಾರಿಯಾಗಲು ಬಿಟ್ಟ ತಪ್ಪಿಗೆ ಪೊಲೀಸರು ಕೈಕೈ ಹಿಸುಕಿಕೊಳ್ಳುತ್ತಿದ್ದಾರೆ.

- Advertisement -
spot_img

Latest News

error: Content is protected !!