- Advertisement -
- Advertisement -
ನವದೆಹಲಿ : ದಶಕಗಳ ಹಿಂದೆ ತಮಿಳುನಾಡಿನ ನಾಗಪಟ್ಟಣಂ ಜಿಲ್ಲೆಯ ಅನಂತಮಂಗಲಂನ ಶ್ರೀ ರಾಜಗೋಪಾಲಸ್ವಾಮಿ ದೇವಸ್ಥಾನದಿಂದ ಕಳವು ಮಾಡಲಾಗಿದ್ದ ವಿಗ್ರಹಗಳು ಭಾರತಕ್ಕೆ ವಾಪಸ್ಸು ಬರಲಿದೆ. ಕ್ರಿ.ಶ 15 ನೇ ಶತಮಾನಕ್ಕೆ ಸೇರಿರುವ ರಾಮ, ಸೀತಾ ಮತ್ತು ಲಕ್ಷ್ಮಣರ ವಿಗ್ರಹಗಳು ಕಳವಾಗಿದ್ದು ಲಂಡನ್ಸೇರಿದ್ದವು.
ಹಲವು ಪರೀಕ್ಷೆಗಳ ನಂತರ ಲಂಡನ್ ನಲ್ಲಿರುವ ವಿಗ್ರಹಗಳು ವಿಜಯನಗರ ಕಾಲಕ್ಕೆ ಸೇರಿದವು ಎಂದು ಸಾಬೀತಾಗಿದೆ. ಆಗಸ್ಟ್ 2019 ರಲ್ಲಿ, ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಇಂಡಿಯಾ ಪ್ರೈಡ್ ಪ್ರಾಜೆಕ್ಟ್ನಿಂದ 4 ಪುರಾತನ ವಿಗ್ರಹಗಳಾದ ಶ್ರೀ ರಾಮ್, ಸೀತಾ, ಲಕ್ಷ್ಮಣ ಮತ್ತು ಹನುಮಾನ್ ಅನ್ನು ಭಾರತದಿಂದ ಕಳವು ಮಾಡಲಾಗಿ ಲಂಡನ್ ಸೇರಿತು ಎನ್ನಲಾಗಿದೆ.ಈ ವಿಗ್ರಹಗಳನ್ನು 1978 ರಲ್ಲಿ ತಮಿಳುನಾಡಿನ ದೇವಾಲಯದಿಂದ ಕಳವು ಮಾಡಲಾಗಿತ್ತು. ಈ ದೇವಾಲಯವನ್ನು ವಿಜಯನಗರ ಕಾಲದಲ್ಲಿ ನಿರ್ಮಿಸಲಾಗಿದ್ದು, ಕೊನೆಗೂ ದೇಶದ ಐತಿಹಾಸಿಕ ಹೆಮ್ಮೆ ದೇಶಕ್ಕೆ ಮರಳುತ್ತಿರುವುದು ಸಂತಸದ ಸಂಗತಿ.
- Advertisement -