Friday, May 3, 2024
Homeಕರಾವಳಿಉಡುಪಿಶಾಸಕರಾಗಿ ಮೊದಲ ಅಧಿವೇಶನದಲ್ಲೇ ಸದನದಿಂದ ಅಮಾನತುಗೊಂಡ ಉಡುಪಿ ಶಾಸಕ ಯಶಪಾಲ್ ಸುವರ್ಣ

ಶಾಸಕರಾಗಿ ಮೊದಲ ಅಧಿವೇಶನದಲ್ಲೇ ಸದನದಿಂದ ಅಮಾನತುಗೊಂಡ ಉಡುಪಿ ಶಾಸಕ ಯಶಪಾಲ್ ಸುವರ್ಣ

spot_img
- Advertisement -
- Advertisement -

ಬೆಂಗಳೂರು: ಉಡುಪಿ ಶಾಸಕ ಯಶಪಾಲ್ ಸುವರ್ಣ ಮೊದಲ ಬಾರಿಗೆ ಶಾಸಕರಾಗಿ ವಿಧಾನಸಭೆ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಮೊದಲ ಅಧಿವೇಶನದಲ್ಲೇ ಸದನದಿಂದ ಅಮಾನತುಗೊಂಡಿದ್ದಾರೆ.

ಇಂದು ವಿಧಾನಸಭೆಯಲ್ಲಿ ಸ್ಪೀಕರ್ ಪೀಠದಲ್ಲಿದ್ದ ಡೆಪ್ಯುಟಿ ಸ್ಪೀಕರ್ ರುದ್ರಪ್ಪ ಲಮಾಣಿ ಅವರ ಮೇಲೆ ವಿಧೇಯಕದ ಪ್ರತಿ ಹರಿದು ತೂರಿದ ಆರೋಪದಡಿ ಬಿಜೆಪಿ ಶಾಸಕರನ್ನು ಸ್ಪೀಕರ್ ಯು.ಟಿ. ಖಾದರ್ ಅಮಾನತು ಮಾಡಿದ್ದಾರೆ.

ಉಡುಪಿ ಶಾಸಕ ಯಶಪಾಲ್ ಸುವರ್ಣ ಸೇರಿದಂತೆ ಹತ್ತು ಮಂದಿ ಬಿಜೆಪಿ ಶಾಸಕರನ್ನು ಪ್ರಸಕ್ತ ಅಧಿವೇಶನ ಮುಗಿಯುವವರೆಗೂ ಅಮಾನತು ಮಾಡಲಾಗಿದೆ.‌

ಈ ಪೈಕಿ ಉಡುಪಿ ಶಾಸಕ ಯಶಪಾಲ್ ಸುವರ್ಣ ಮತ್ತು ದೊಡ್ಡಬಳ್ಳಾಪುರ ಶಾಸಕ ಧೀರಜ್ ಮುನಿರಾಜು ಮೊದಲ ಬಾರಿಗೆ ಶಾಸಕರಾಗಿ ಪಾಲ್ಗೊಂಡ ಮೊದಲ ಅಧಿವೇಶನದಲ್ಲೇ ಅಸಭ್ಯ ವರ್ತನೆ ಆರೋಪದಡಿ ಸದನದಿಂದ ಅಮಾನತುಗೊಂಡಿದ್ದಾರೆ.

- Advertisement -
spot_img

Latest News

error: Content is protected !!