- Advertisement -
- Advertisement -
ಮಂಗಳೂರು: ಶಾಸಕ ಯು ಟಿ ಖಾದರ್ ಅವರ ಕಾರು ಬ್ರೇಕ್ ಫೈಲ್ ಅಪಘಾತಕ್ಕೀಡಾದ ಘಟನೆ ಪಡೀಲ್ ನಲ್ಲಿ ನಡೆದಿದೆ. ಶಾಸಕರು ಬಿ ಸಿ ರೋಡ್ ಕಡೆಯಿಂದ ಮಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಘಟನೆ ನಡೆದಿದೆ.
ಮಂಗಳೂರಿನ ಪಡೀಲ್ ಬಳಿಯ ಕಣ್ಣೂರು ಎಂಬಲ್ಲಿ ರಾಷ್ಟ್ರೀಯ ಹೆದ್ದಾರಿ ಸಮೀಪ ಕಾರ್ನ ಬ್ರೇಕ್ ಫೈಲ್ ಆಗಿದ್ದು, ಚಾಲಕ ತಕ್ಷಣ ಕಾರು ನಿಲ್ಲಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದಾಗಿ ಶಾಸಕರು ಅಪಾಯದಿಂದ ಪಾರಾಗಿದ್ದಾರೆ. ಬಳಿಕ ಬದಲಿ ಕಾರಿನ ಮೂಲಕ ಮಂಗಳೂರಿಗೆ ಶಾಸಕರು ತೆರಳಿದ್ದಾರೆ ಎಂದು ತಿಳಿದುಬಂದಿದೆ.
- Advertisement -