- Advertisement -
- Advertisement -
ಬೆಳ್ತಂಗಡಿ: ಹೊಟ್ಟೆನೋವಿಂದ ನರಳುತ್ತಿದ್ದ ಅಕ್ಕಪಕ್ಕದ ಮನೆಯ ಇಬ್ಬರು ವಿಷ ಸೇವಿಸಿ ಯುವತಿಯರು ಒಂದು ದಿನದ ಅಂತರದಲ್ಲಿ ಮೃತಪಟ್ಟ ಘಟನೆ ಪಟ್ರಮೆ ಗ್ರಾಮದಲ್ಲಿ ನಡೆದಿದೆ.
ಇಲ್ಲಿನ ದೇವರಕಾಡು ನಿವಾಸಿ ಬಾಬು ಎಂಬುವರ ಮಗಳು ರಕ್ಷಿತಾ(21) ಹಾಗೂ ಅವರ ಪಕ್ಕದ ಮನೆಯ ಶಿವರಾಮ ಆಚಾರ್ಯ ಎಂಬುವವರ ಪುತ್ರಿ ಲಾವಣ್ಯ(21) ಮೃತಪಟ್ಟ ಯುವತಿಯರು.
ಇಬ್ಬರನ್ನೂ ಚಿಕಿತ್ಸೆಗಾಗಿ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ರಕ್ಷಿತಾ ಚಿಕಿತ್ಸೆ ಫಲಿಸದೇ ನಿನ್ನೆ ಸಾವನ್ನಪ್ಪಿದ್ದರೆ, ಲಾವಣ್ಯ ಇಂದು ಸಾವನ್ನಪ್ಪಿದ್ದಾಳೆ. ಸಾವಿಗೆ ಕಾರಣ ಏನೆಂದು ಖಚಿತ ಮಾಹಿತಿ ಇನ್ನೂ ತಿಳಿದುಬಂದಿಲ್ಲ. ಇಬ್ಬರು ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದರು.ಧರ್ಮಸ್ಥಳ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
- Advertisement -