- Advertisement -
- Advertisement -
ಚೆನ್ನೈ: ಕೊವಿಡ್ ಸೋಂಕಿಗೆ ತುತ್ತಾಗಿದ್ದ ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷ ನಾರಾಯಣಸಾಮಿ ಬಾಲಕೃಷ್ಣನ್ ಮೃತಪಟ್ಟಿದ್ದಾರೆ.
ತಮಿಳುನಾಡಿನ ಮೂಲದ ಕಟ್ಟಡ ಸಾಮಗ್ರಿಗಳನ್ನು ತಯಾರಿಸುವ ಭಾರತದ ಖ್ಯಾತ ಸಂಸ್ಥೆ ಇದಾಗಿದ್ದು, ಈ ಕಂಪನಿಯ ಅಧ್ಯಕ್ಷ ನಾರಾಯಣಸಾಮಿ ಬಾಲಕೃಷ್ಣನ್ ಮಹಾಮಾರಿ ಕೊರೊನಾಗೆ ಬಲಿಯಾಗಿದ್ದಾರೆ.
2008 ರಿಂದ ನಾರಾಯಣಸಾಮಿ ಬಾಲಕೃಷ್ಣನ್ ಟಿವಿಎಸ್ ಸುಂದ್ರಾಮ್ ಫಾಸ್ಟೆನರ್ಸ್ ಲಿಮಿಟೆಡ್ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದರು. ಸುಮಾರು 12 ವರ್ಷದಿಂದ ಅಧ್ಯಕ್ಷರಾಗಿದ್ದಾರೆ.
ನಾರಾಯಣಸಾಮಿ ಬಾಲಕೃಷ್ಣನ್ ನಿಧನಕ್ಕೆ ಕಂಪನಿ ಮತ್ತು ಅನೇಕ ಅನುಯಾಯಿಗಳು ಸಂತಾಪ ಸೂಚಿಸಿದ್ದಾರೆ. ತಮಿಳುನಾಡಿನ ಚೆನ್ನೈನಲ್ಲಿ ಪ್ರಧಾನ ಕಚೇರಿಯಿದ್ದು, 500ಕ್ಕೂ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.
- Advertisement -