Wednesday, June 3, 2026
Homeಕರಾವಳಿತುಳು ಚಿತ್ರ ʻಧರ್ಮ ಚಾವಡಿʼ ಜು.11ರಂದು ಬಿಡುಗಡೆ 

ತುಳು ಚಿತ್ರ ʻಧರ್ಮ ಚಾವಡಿʼ ಜು.11ರಂದು ಬಿಡುಗಡೆ 

- Advertisement -
- Advertisement -

ಪುತ್ತೂರು: ಕೃಷ್ಣವಾಣಿ ಪಿಕ್ಚರ್ಸ್ ಲಾಂಛನದಲ್ಲಿ ನಡುಬೈಲ್‌ ಜಗದೀಶ್ ಅಮೀನ್ ನಿರ್ಮಾಣ, ನಿತಿನ್ ರೈ ಕುಕ್ಕುವಳ್ಳಿ ನುಳಿಯಾಲು ನಿರ್ದೇಶನದ ‘ಧರ್ಮ ಚಾವಡಿ’ ಕರಾವಳಿಯ ಎಲ್ಲ ಚಿತ್ರ ಮಂದಿರಗಳಲ್ಲಿ ತುಳು ಚಿತ್ರ ಜು.11ರಂದು ಬಿಡುಗಡೆಗೊಳ್ಳಲಿದೆ.

ಈ ಚಿತ್ರಕ್ಕೆ ಪ್ರಸಾದ್ ಕೆ.ಶೆಟ್ಟಿ ಸಂಗೀತ ನೀಡಿದ್ದು, ಶ್ರೀನಾಥ್ ಪವಾರ್ ಸಂಕಲನ, ಅರುಣ್ ರೈ ಪುತ್ತೂರು ಛಾಯಾಗ್ರಹಣ ಚಿತ್ರಕ್ಕಿದ್ದು, ರಜಾಕ್ ಪುತ್ತೂರು ಚಿತ್ರಕಥೆ ಬರೆದಿದ್ದಾರೆ.

ಮುಖ್ಯಭೂಮಿಕೆಯಲ್ಲಿ ರಮೇಶ್ ರೈ ಕುಕ್ಕುವಳ್ಳಿ ನಟಿಸಿದ್ದು, ರವಿ ಸ್ನೇಹಿತ್, ಚೇತನ್ ರೈ ಮಾಣಿ, ಸುರೇಶ್ ರೈ, ಪ್ರಕಾಶ್ ಧರ್ಮನಗರ ದೀಪಕ್ ರೈ ಪಾಣಾಜೆ, ಸುಂದರ್‌ ರೈ ಮಂದಾರ, ರಂಜನ್ ಬೋಳೂರು, ಮನೀಶ್ ಶೆಟ್ಟಿ ಸಿದ್ದಕಟ್ಟೆ, ರಕ್ಷಣ್ ಮಾಡೂರು, ರೂಪಾ ಡಿ.ಶೆಟ್ಟಿ, ಸವಿತಾ ಅಂಚನ್, ಧನ್ಯಾ ಪೂಜಾರಿ, ನೇಹಾ ಕೋಟ್ಯಾನ್, ನಿಶ್ಮಿತಾ ಶೆಟ್ಟಿ ಸೇರಿದಂತೆ ಅನೇಕ ಕಾರಾವಳಿಯ ಕಲಾವಿದರು ಅಭಿನಯಿಸಿದ್ದಾರೆ.

- Advertisement -

Latest News

error: Content is protected !!