- Advertisement -
- Advertisement -
ಶ್ರೀಕೃಷ್ಣಮಠದ ಮಧ್ವಮಂಟಪದಲ್ಲಿ ಪರ್ಯಾಯ ಅದಮಾರು ಮಠದ ಆಶ್ರಯದಲ್ಲಿ , ತುಳು ಶಿವಳ್ಳಿ ಮಾಧ್ವಮಹಾಮಂಡಲ ( ರಿ ) ಉಡುಪಿ ಇವರ ಸಂಯೋಜನೆಯಲ್ಲಿ ತುಳಸಿ ಸಂಕೀರ್ತನಾ ಸ್ಪರ್ಧೆ ನಡೆಯಿತು.
ಈ ತುಳಸಿ ಸಂಕೀರ್ತನಾ ಸ್ಪರ್ಧೆಯಲ್ಲಿ ವಿಜೇತರಾದ ತಂಡಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಪರ್ಯಾಯ ಪೀಠಾಧೀಶರಾದ ಶ್ರೀಈಶಪ್ರಿಯತೀರ್ಥ ಶ್ರೀಪಾದರು ಅನುಗ್ರಹ ಸಂದೇಶ ನೀಡಿದರು.
ಪುರುಷರ ವಿಭಾಗದಲ್ಲಿ ಮಹಿಳೆಯರ ವಿಭಾಗದಲ್ಲಿ ಬಾಲಕರ ವಿಭಾಗದಲ್ಲಿ ವಿಜೇತರಿಂದ ಸಂಕೀರ್ತನೆ ನಡೆಯಿತು. ಬಳಿಕ ಬಹುಮಾನ ವಿತರಣಾ ಕಾರ್ಯಕ್ರಮ ನಡೆಯಿತು.
ಉದ್ಯಮಿಗಳಾದ ರಂಜನ್ ಕಲ್ಕೂರ , ಬಾಲಾಜಿ ರಾಘವೇಂದ್ರ ಆಚಾರ್ , ಕರ್ನಾಟಕ ಬ್ಯಾಂಕಿನ ಉಡುಪಿ ಪ್ರಾದೇಶಿಕ ಉಪಮಹಾಪ್ರಭಂದಕರಾದ ರಾಜಗೋಪಾಲ ತಂತ್ರಿ ಮತ್ತು ತುಶಿಮಾಮ ದ ಪದಾಧಿಕಾರಿಗಳು ಉಪಸ್ಥಿತರಿದ್ದರು.
- Advertisement -