ಬಂಟ್ವಾಳ; ಒಂಟಿ ಮಹಿಳೆಯಿದ್ದ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿ, ಕೊಲೆ ಬೆದರಿಕೆ ಹಾಕಿದ ಹಾಸನ ಮೂಲದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿರುವ ಘಟನೆ ಕಲ್ಲಡ್ಕ ದಲ್ಲಿ ನಡೆದಿದೆ.
ಹಾಸನ ಜಿಲ್ಲೆಯ ಬೇಲೂರು ನಿವಾಸಿ ರಿಕ್ಷಾ ಚಾಲಕ ಪ್ರಮೋದ್ ಬಂಧಿತ ಆರೋಪಿ. ಬಂಧಿತನನ್ನು ಪೊಲೀಸರು ಕೋರ್ಟ್ ಗೆ ಹಾಜರುಪಡಿಸಿ ಆತನಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
https://googleads.g.doubleclick.net/pagead/ads?gdpr=0&client=ca-pub-9510930728282230&output=html&h=280&adk=4236278173&adf=4248754917&pi=t.aa~a.2109291183~i.3~rp.4&w=948&abgtt=7&fwrn=4&fwrnh=100&lmt=1718166821&num_ads=1&rafmt=1&armr=3&sem=mc&pwprc=6646526284&ad_type=text_image&format=948×280&url=https%3A%2F%2Fnammabantwala.com%2F2024%2F06%2Fsexual-harassment-h%2F&host=ca-host-pub-2644536267352236&fwr=0&pra=3&rh=200&rw=948&rpe=1&resp_fmts=3&wgl=1&fa=27&uach=WyJXaW5kb3dzIiwiMTUuMC4wIiwieDg2IiwiIiwiMTI2LjAuNjQ3OC41NiIsbnVsbCwwLG51bGwsIjY0IixbWyJOb3QvQSlCcmFuZCIsIjguMC4wLjAiXSxbIkNocm9taXVtIiwiMTI2LjAuNjQ3OC41NiJdLFsiR29vZ2xlIENocm9tZSIsIjEyNi4wLjY0NzguNTYiXV0sMF0.&dt=1718271174252&bpp=4&bdt=6892&idt=-M&shv=r20240610&mjsv=m202406100101&ptt=9&saldr=aa&abxe=1&cookie=ID%3D36b75903887b45b7%3AT%3D1714837996%3ART%3D1718254428%3AS%3DALNI_MaJHkl1iLOa_yZfHuW3cJKoRoxdHw&gpic=UID%3D00000e0c2acf4a66%3AT%3D1714837996%3ART%3D1718254428%3AS%3DALNI_MZ-WkQNn9drQkBik0FD9YeoBKmMdQ&eo_id_str=ID%3Da11757c22364f506%3AT%3D1714837996%3ART%3D1718254428%3AS%3DAA-Afjb-KN2ddTJJSqi5q6bWC10d&prev_fmts=0x0&nras=2&correlator=2485197644741&frm=20&pv=1&ga_vid=1179705667.1714837988&ga_sid=1718271173&ga_hid=1235159503&ga_fc=1&u_tz=330&u_his=4&u_h=720&u_w=1280&u_ah=672&u_aw=1280&u_cd=24&u_sd=1.5&dmc=8&adx=158&ady=1906&biw=1263&bih=551&scr_x=0&scr_y=900&eid=44759876%2C44759927%2C44759842%2C95334511%2C95334525%2C95334571%2C95334580%2C31084414%2C42532861%2C95334052%2C95335292%2C21065724&oid=2&pvsid=1369699245123617&tmod=837186177&uas=3&nvt=2&ref=https%3A%2F%2Fnammabantwala.com%2Fcategory%2F%25E0%25B2%25AC%25E0%25B2%2582%25E0%25B2%259F%25E0%25B3%258D%25E0%25B2%25B5%25E0%25B2%25BE%25E0%25B2%25B3%2Fpage%2F2%2F%3Ffilter_by%3Dfeatured&fc=1408&brdim=0%2C0%2C0%2C0%2C1280%2C0%2C1280%2C672%2C1280%2C551&vis=1&rsz=%7C%7Cs%7C&abl=NS&fu=128&bc=31&bz=1&td=1&tdf=0&psd=W251bGwsbnVsbCwibGFiZWxfb25seV81IiwxXQ..&nt=1&ifi=2&uci=a!2&btvi=1&fsb=1&dtd=4065 ಕಲ್ಲಡ್ಕ ಸಮೀಪದ ಬೊಂಡಾಲ ಎಂಬಲ್ಲಿನ ಸಂತ್ರಸ್ತ ಮಹಿಳೆ ಬಂಟ್ವಾಳ ನಗರ ಪೋಲೀಸ್ ಠಾಣೆಗೆ ದೂರು ನೀಡಿದ್ದಾರೆ.ಮಹಿಳೆಯ ಸ್ವಂತ ಊರು ಹಾಸನ ತಾಲೂಕಿನ ಬೇಲೂರು ಆಗಿದ್ದು, ಕಲ್ಲಡ್ಕದ ಅಮ್ಟೂರು ಎಂಬಲ್ಲಿಗೆ ಮದುವೆ ಮಾಡಿ ಕೊಡಲಾಗಿದೆ.ಮಹಿಳೆಯ ಊರು ಹಾಸನದಲ್ಲಿ ಪ್ರಮೋದ್ ರಿಕ್ಷಾ ಚಾಲಕನಾಗಿದ್ದ. ಒಂದೆರೆಡು ಬಾರಿ ತಾಯಿ ಮನೆಗೆ ಈತನ ರಿಕ್ಷಾದಲ್ಲಿ ಬಾಡಿಗೆ ಮಾಡಿಕೊಂಡು ಹೋಗಿರುವಾಗ ಸಂತ್ರಸ್ತ ಮಹಿಳೆಗೆ ಈತ ಪರಿಚಯಸ್ಥನಾಗಿದ್ದು, ಮೊಬೈಲ್ ನಂ.ನ್ನು ಆತ ಪಡೆದುಕೊಂಡಿದ್ದ ಎನ್ನಲಾಗಿದೆ.
ಮೊಬೈಲ್ ಮೂಲಕ ಈತನ ಸಂಪರ್ಕ ಅತಿಯಾಗಿ ಕಳೆದ ಕೆಲ ಸಮಯದ ಹಿಂದೆ ಗಂಡನ ಮನೆ ಕಲ್ಲಡ್ಕಕ್ಕೆ ಬಂದಿದ್ದ. ಮನೆಗೆ ಬಂದ ಈತ ಮಹಿಳೆಗೆ ಕೀಟಲೆ ನೀಡಿದ್ದಲ್ಲದೇ, ಮನೆಯೊಳಗೆ ಇದ್ದ ಅನೇಕ ಬೆಲೆ ಬಾಳುವ ವಸ್ತುಗಳನ್ನು ಹಾಳು ಮಾಡಿ ಹೋಗಿದ್ದ. ಈ ಸಂದರ್ಭದಲ್ಲಿ ಆತನಿಗೆ ಎಚ್ಚರಿಕೆ ನೀಡಿ ಕಳುಹಿಸಲಾಗಿತ್ತು ಎಂದು ಹೇಳಲಾಗಿದೆ.
ಇದೀಗ ಮತ್ತೆ ಹಾಸನದಿಂದ ಬಂಟ್ವಾಳಕ್ಕೆ ಬಂದಿಳಿದ ಆರೋಪಿ ಪ್ರಮೋದ್ ಮತ್ತೆ ಗಂಡನಿಲ್ಲದ ಸಮಯ ನೋಡಿಕೊಂಡು ಮಹಿಳೆಯ ಮನೆಗೆ ನುಗ್ಗಿದ್ದಾನೆ.ಇದೀಗ ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಬಂಟ್ವಾಳ ನಗರ ಠಾಣಾ ಪೋಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ