- Advertisement -
- Advertisement -
ಸುರತ್ಕಲ್: ಸುರತ್ಕಲ್ ಟೋಲ್ಗೇಟ್ ರದ್ದಾದ್ರೂ ಕೂಡಾ ಸುಂಕ ವಸೂಲಿ ಮುಂದುವರೆದಿದೆ. ಸುರತ್ಕಲ್ ಟೋಲ್ಗೇಟ್ ರದ್ದಾಯ್ತು ಅಂತ ಸಂಸದರು ಟ್ವೀಟ್ ಮಾಡಿದ್ರೂ ಟೋಲ್ ಕಲೆಕ್ಷನ್ ಮಾತ್ರ ನಡೆಯುತ್ತಲೇ ಇದೆ. ಈ ಬಗ್ಗೆ ಪ್ರಶ್ನಿಸಿದ್ದಕ್ಕೆ ಸರ್ಕಾರದ ನೋಟಿಫಿಕೇಷನ್ ಟೋಲ್ ಕಂಪನಿಯ ಕೈಸೇರಿಲ್ಲ ಎನ್ನುವ ಉತ್ತರ ಬರ್ತಾ ಇದೆ. ಅಲ್ಲದೇ ಹೆಜಮಾಡಿಯಲ್ಲಿ ಸುಂಕ ಜಾಸ್ತಿಯಾಗುವ ಸಾಧ್ಯತೆಯೂ ಇದೆ. ಹೀಗಾಗಿ ಸುರತ್ಕಲ್ ಟೋಲ್ ರದ್ದಾದ್ರೂ ಜನರಿಗೆ ಪ್ರಯೋಜನವಿಲ್ಲದಂತಾಗಿದೆ. ಈ ವಿಚಾರ ಈಗ ಮತ್ತಷ್ಟು ಚರ್ಚೆಗೆ ಕಾರಣವಾಗಿದೆ.
ಈ ನಿರ್ಧಾರವನ್ನು ಮಾಜಿ ಸಚಿವ, ಶಾಸಕ ಯು.ಟಿ. ಖಾದರ್ ವಿರೋಧಿಸಿದ್ದಾರೆ. ಟೋಲ್ಗೇಟ್ನ್ನು ಶಿಫ್ಟ್ ಮಾಡಿದ್ದಾರಷ್ಟೇ, ಎಲ್ಲೂ ಕೂಡ ರದ್ದಾಗಿಲ್ಲ. ಇದನ್ನು ಹೆಜಮಾಡಿ ಟೋಲ್ಗೇಟ್ ಜೊತೆಗೆ ವಿಲೀನ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
- Advertisement -