ಮೇಷ:ನೀವು ಯೋಚಿಸುವ ಅಗತ್ಯವಿಲ್ಲ. ಕಷ್ಟಕರವಾದಂಥ ಸಂದರ್ಭಗಳನ್ನು ಎದುರಿಸಿ ಸಮಸ್ಯೆಗಳನ್ನು ಪರಿಹರಿಸಲು ನಿಮಗೆ ಸಾಧ್ಯ . ತಾಳ್ಮೆಯಿಂದ ವ್ಯವಹಾರ ನಡೆಸಿ.
ವೃಷಭ: ಅನಾವಶ್ಯಕ ಮಾತುಕತೆ ಬೇಡ. ದಡ್ಡರ ಬಳಿ ವಾದಿಸುವಂತಹ ಪ್ರಸಂಗದಲ್ಲಿ ಸುಮ್ಮನಿದ್ದು ಬಿಡಿ. ಕಿರಿಕಿರಿಯ ಅನುಭವ ಎದುರಿಸುವಿರಿ.
ಮಿಥುನ: ಆಕಸ್ಮಿಕ ಪ್ರವಾಸ ಕಾರ್ಯಕ್ರಮಗಳು ಯೋಜನೆಯಾಗಿ ಖುಷಿಯಾಗುವುದು ಪಯಣದಲ್ಲಿ ವಿಶೇಷ ಕಾಳಜಿ ಬೇಕು ಮಕ್ಕಳ ಅರೋಗ್ಯದಲ್ಲಿ ಜಾಗರೂಕತೆ ಅಗತ್ಯ.
ಕಟಕ: ಆಸ್ತಿಯ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಉತ್ತಮ ಮುನ್ನಡೆ. ಚಿಂತಿಸುವ ಅಗತ್ಯವಿಲ್ಲ. ರಾಯರಲ್ಲಿ ನಂಬಿಕೆ ಇಡೀ.
ಸಿಂಹ:ಶಾಂತಿ ಇರಲಿ ಗೆಲ್ಲುವ ಸಂದರ್ಭದಲ್ಲಿ ಅಸಹಾಯಕತೆಯೇ ಉಂಟಾಗಬಹುದು. ಧೈರ್ಯ ಮತ್ತು ಕರುಣೆ ಅಗತ್ಯ
ಕನ್ಯಾ: ಬಾಳಸಂಗಾತಿಯ ಜತೆಗೆ ಮನಸ್ತಾಪ,ಕೆಲವು ಕೆಲಸಗಳಲ್ಲಿ ಸ್ವಲ್ಪಮಟ್ಟಿನ ವಿಳಂಬ ಉಂಟಾಗಬಹುದು. ಮನೆಯಲ್ಲಿ ವಾತಾವರಣ ತಿಳಿಯಾಗಿರುವುದಿಲ್ಲ
ತುಲಾ: ಕಚೇರಿಯಲ್ಲಿ ಸತತ ಕಷ್ಟಗಳನ್ನು ಎದುರಿಸುತ್ತಲೇ ಬಂದಿದ್ದೀರಿ.ನಿಮ್ಮ ಪದೋನ್ನತಿಯ ಸಾಧ್ಯತೆ ಇದೆ ನಂಬಿಕೆ ಕಳೆದುಕೊಳ್ಳಬೇಡಿ.
ವೃಶ್ಚಿಕ: ವಿರೋಧಗಳು ಎದುರಾಗಿ ಬಂದರೂ ಕೆಲವು ಸಹೋದ್ಯೋಗಿಗಳು ಬೆಂಬಲ ಸೂಚಿಸಲಿದ್ದಾರೆ. ನಿಮ್ಮ ದಾರಿಯನ್ನು ನೀವೇ ಕಂಡುಕೊಳ್ಳಿ
ಧನುಸ್ಸು: ಅನಾವಶ್ಯಕ ಮಾತು ಕತೆ ಬೇಡ. ಇತರ ದುಷ್ಟ ಮನಸ್ಥಿತಿಗಳಿಂದ ದೂರವಿರಿ.ಮಾನಸಿಕ ಶಾಂತಿಯೂ ಸಿಗಲಿದೆ.
ಮಕರ: ಶ್ರೀ ಲಕ್ಷ್ಮೀನರಸಿಂಹನನ್ನು ಆರಾಧಿಸಿ. ಹಲವು ವಿಚಾರಗಳಲ್ಲಿ ಉಂಟಾಗುತ್ತಿದ್ದ ಸಣ್ಣ ಕಿರಿಕಿರಿಗಳು ಬೇಗಬೇಗನೆ ಕೊನೆಗೊಳ್ಳಲಿದೆ ಕುಟುಂಬದಲ್ಲಿ ನೆಮ್ಮದಿ.
ಕುಂಭ:ಈ ದಿನ ಶುಭಕರ ಹಲವು ದಿನಗಳಿಂದ ತೀರ್ಮಾನಗೊಳ್ಳದೆ ಉಳಿದುಕೊಂಡಿದ್ದ ವಿಚಾರಗಳು ನಿಮ್ಮ ಪರವಾಗಿ ಒದಗಿ ಸಮಾಧಾನಪಡಲಿದ್ದೀರಿ.
ಮೀನ: ಆರೋಗ್ಯದ ವಿಚಾರದಲ್ಲಿ ಸಾಧ್ಯವಾದಷ್ಟು ಜಾಗ್ರತೆ.ಸಾಲ ನೀಡುವುದು ಬೇಡ ದೂರಪ್ರಯಾಣವನ್ನು ಮುಂದೂಡಲು ಯತ್ನಿಸಿ.