- Advertisement -
- Advertisement -
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ನಟ ದರ್ಶನ್ ಅವರನ್ನು ಇಂದು ಭೇಟಿಯಾಗಲು ಪತ್ನಿ ವಿಜಯಲಕ್ಷ್ಮೀ ಜೈಲಿಗೆ ಆಗಮಿಸಿದ್ದರು.
ಆರನೇ ಬಾರಿಗೆ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಭೇಟಿಗಾಗಿ ವಿಜಯಲಕ್ಷ್ಮಿ ಬಂದಿದ್ದರು. ಕಳೆದ ವಾರ ಸೋಮವಾರ ದರ್ಶನ್ ಅವರನ್ನು ವಿಜಯಲಕ್ಷ್ಮೀ ಭೇಟಿಯಾಗಿ ಹೋಗಿದ್ದರು.ಕಳೆದ ವಾರ ಕೊಲ್ಲೂರು ಮೂಕಾಂಬಿಕಾ ದೇವಾಲಯದಲ್ಲಿ ನವ ಚಂಡಿಕಾ ಯಾಗವನ್ನು ಡಿ ಬಾಸ್ ಗಾಗಿ ಮಾಡಿದ್ದರು. ಅದರ ಪ್ರಸಾದವನ್ನು ದರ್ಶನ್ ಗೆ ನೀಡಲು ವಿಜಯಲಕ್ಷ್ಮಿ ಜೈಲಿಗೆ ಆಗಮಿಸಿದ್ದರು. ಕೆಲ ಹೊತ್ತು ಮಾತುಕತೆ ನಡೆಸಿ ತೆರಳಿದ್ದಾರೆ
- Advertisement -