- Advertisement -
- Advertisement -
‘ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳ ಆಗುತ್ತಿದೆ ಇದಕ್ಕೆ ಬಹಳ ದೊಡ್ಡ ವ್ಯಕ್ತಿಗಳ ಕೈವಾಡವಿದೆ,’ ಎಂದು ಶ್ರೀರಾಮ ಸೇನೆಯ ಮುಖ್ಯಸ್ಥರಾದ ಪ್ರಮೋದ್ ಮುತಾಲಿಕ್ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಅವರು ತೀರ್ಥಹಳ್ಳಿಯ ಪ್ರವಾಸಿ ಮಂದಿರದಲ್ಲಿ ಗುರುವಾರದಂದು ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ‘ಇಡೀ ಬೆಂಗಳೂರನ್ನೇ ನಲುಗಿಸಿದ ರಾಮೇಶ್ವರಂ ಕೆಫೆ ಬ್ಲಾಸ್ಟ್ ಹಾಗೂ ಕುಕ್ಕರ್ ಬಾಂಬ್ ಸ್ಫೋಟ ಭಯೋತ್ಪಾದಕ ಘಟನೆಗಳಾಗಿದ್ದು, ಇವುಗಳನ್ನು ಮಾಡಿದ ವ್ಯಕ್ತಿ ತೀರ್ಥಹಳ್ಳಿ ಮೂಲದ ಶಾರಿಕ್ ಹಾಗೂ ಮತಿನ್. ದಿನಕಳೆದಂತೆ ತೀರ್ಥಹಳ್ಳಿ ವ್ಯವಸ್ಥಿತವಾಗಿ ಎರಡನೇ ಭಟ್ಕಳವಾಗುತ್ತಿದೆ,’ ಎಂದು ತಿಳಿಸಿದರು.
ಇನ್ನು ನಂದಿತಾ ಅತ್ಯಾಚಾರ ಪ್ರಕರಣದಲ್ಲಿ ಇಸ್ಲಾಮಿಕ್ ಮಾನಸಿಕತೆ ಇರುವ ವ್ಯಕ್ತಿಗಳಿದ್ದಾರೆ. ಎಲ್ಲವೂ ಹೊರಗೆ ಬರಬೇಕಾದರೆ ಸರಿಯಾಗಿ ತನಿಖೆಯಾಗಬೇಕು, ಎಂದು ತಿಳಿಸಿದರು.
- Advertisement -